ದಾವಣಗೆರೆ: ಜಿಲ್ಲೆಯಾದ್ಯಂತಕೊರೊನಾ ವಾರಿಯರ್ಸ್ ಹಾಗೂ ಆರೋಗ್ಯ ಸಿಬ್ಬಂದಿಯವರಿಗೆ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಸಂಸದ ಜಿ.ಎಂ ಸಿದ್ದೇಶ್ವರ್ ಚಾಲನೆ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿಂದು ಲಸಿಕಾ ಅಭಿಯಾನಕ್ಕೆ ಚಾಲನೆ ನಂತರ ಮಾತನಾಡಿ, ಡಿಗ್ರೂಪ್ ನೌಕರರಾದ ರಾಜಾಭಕ್ಷ್ ಮೊದಲಿ , ಕೊರನಾ ವಾರ್ಡ್ ನಲ್ಲಿ ಕರ್ತವ್ಯ ನಿರ್ವಹಿಸಿದ ಡಾ.ಶಶಿಧರ್ ಅವರಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕೊವಾಕ್ಸಿನ್ ಲಸಿಕೆ ನೀಡಲಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ.ಇಂದು 100 ಜನರಿಗೆ ಲಸಿಕೆ ನೀಡಲಾಗಿದೆ.7 ವಾಕ್ಸಿನೇಷನ್ ಸೆಂಟರ್ ಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದರು.
- ಜಿಲ್ಲೆಗೆ 13,500 ಕೋವಿಡ್ ಶೀಲ್ಡ್ ಹಾಗೂ 708 ಕೊವಾಕ್ಸಿನ್
- 7 ವಾಕ್ಸಿನೇಷನ್ ಸೆಂಟರ್ ಗಳಲ್ಲಿ ಲಸಿಕೆ ವಿತರಣೆ
- ಗರ್ಭಿಣಿಯರು, 18 ವರ್ಷದ ಕೆಳಗಿನವರಿಗೆ ಲಸಿಕೆ ನೀಡಲಾಗಿಲ್ಲ
ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು.ನಮ್ಮ ದೇಶದಲ್ಲೇ ತಯಾರಾಗಿರುವ ಲಸಿಕೆ ಇದಾಗಿದೆ.ಜಿಲ್ಲೆಗೆ 13,500 ಕೋವಿಡ್ ಶೀಲ್ಡ್ ಹಾಗೂ 708 ಕೊವಾಕ್ಸಿನ್ ಬಂದಿದೆ. ಜಿಲ್ಲೆಗೆ ಒಟ್ಟಾರೆಯಾಗಿ 19,500 ಲಸಿಕೆ ಮೊದಲ ಹಂತದಲ್ಲಿ ಬೇಕಿದೆ.ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಲಸಿಕೆ ಆಗಮಿಸಲಿದೆ.ಮೊದಲ ಹಂತದಲ್ಲಿ ಡಿ ಗ್ರೂಪ್ ನೌಕರರಿಗೆ ಹಾಗೂ ವೈದ್ಯರಿಗೆ ಲಸಿಕೆ ನೀಡಲಾಗುವುದು.ಎರಡನೇ ಹಂತದಲ್ಲಿ ಪೋಲಿಸರು ಹಾಗೂ ಕೋವಿಡ್ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ನೀಡಲಾಗುತ್ತದೆ. ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟಿರುವ ನಾಗರೀಕರಿಗೆ ನೀಡಲಾಗುವುದು ಎಂದರು.ಇಂದು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆದವರು ಆರೋಗ್ಯವಾಗಿದ್ದಾರೆ.ದೇಶದ ಜನರಿಗಾಗಿ ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳು ಶ್ರಮ ವಹಿಸಿ ಲಸಿಕೆ ಕಂಡುಹಿಡಿದಿದ್ದಾರೆ. ಸಾರ್ವಜನಿಕರು ಹಂತಹಂತವಾಗಿ ಲಸಿಕೆ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.ಸುಳ್ಳು ಸುದ್ದಿಗಳಿಗೆ ವದಂತಿಗಳಿಗೆ ಕಿವಿಗೊಡಬಾರದು.ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಜಗಳೂರು ತಾಲ್ಲೂಕಿನ ಬಿಳಿಚೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತಿದೆ.ದಾವಣಗೆರೆಯ ಜೆಜೆಎಂಸಿ ವೈದ್ಯಕೀಯ ಕಾಲೇಜಿನಲ್ಲಿಯೂ ಲಸಿಕೆ ನೀಡಲಾಗಿದೆ.ನಾಗರೀಕರು ಧೈರ್ಯದಿಂದ ಲಸಿಕೆ ಪಡೆಯಬೇಕು ಎಂದರು.
ನಗರ ಸೇರಿದಂತೆ ಜಿಲ್ಲೆಯಾದ್ಯಂತ 7 ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ನೀಡಲಾಗಿದೆ.ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಹಾಗು ಬಾಪೂಜಿ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗಿದೆ.ದಾವಣಗೆರೆ ಹೊರತುಪಡಿಸಿ ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ ತಾಲ್ಲೂಕು ಕೇಂದ್ರಗಳಲ್ಲಿ ಜಗಳೂರು ತಾಲ್ಲೂಕಿನ ಬಿಳಚೋಡು ಗ್ರಾಮದ ಒಂದು ಪಿಹೆಚ್ ಸಿ ಯಲ್ಲಿ ವ್ಯಾಕ್ಸಿನೇಷನ್ ನೀಡಲಾಗಿದೆ. ಗರ್ಭಿಣಿಯರು ಬಾಣಂತಿಯರಿಗೆ ಹಾಗೂ 18 ವರ್ಷದ ಕೆಳಗಿನವರಿಗೆ ಲಸಿಕೆ ನೀಡಲಾಗಿಲ್ಲ ಜಿಲ್ಲಾಸ್ಪತ್ರೆಯಲ್ಲಿ ಮೊದಲ ಲಸಿಕೆಯನ್ನು ಡಿಗ್ರೂಪ್ ನೌಕರರಾದ ರಾಜಾಭಕ್ಷ್ ಮೊದಲಿ ಕೊವಾಕ್ಸಿನ್ ಲಸಿಕೆ ಪಡೆದರು.ನಂತರ ಮಾತನಾಡಿದ ಅವರು ಲಸಿಕೆ ಪಡೆದಿದ್ದೇನೆ ರೋಗ್ಯವಾಗಿದ್ದೇನೆ.ಲಸಿಕೆಯಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲ ಸಾರ್ವಜನಿಕರು ಭಯಪಡುವ ಅಗತ್ಯ ಇಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎ ರವೀಂದ್ರನಾಥ್, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ,ಡಾ.ರಾಘವನ್ ಹಾಗೂ ಆರೋಗ್ಯ ಸಿಬ್ಬಂದಿಗಳು ಇದ್ದರು.