ಬೆಂಗಳೂರು; ರಾಜ್ಯ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಡಿ. 10ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.
ನಿನ್ನೆ ರಾತ್ರಿ ಬಿಜೆಪಿ ಅಭ್ಯರ್ಥಿ ಪಟ್ಟಿ ಘೋಷಣೆ ಮಾಡಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದ್ದು, ರಾಜ್ಯದ ಆಡಳಿತ ಪಕ್ಷ ಬಿಜೆಪಿಗೆ ಚುನಾವಣೆ ಪ್ರತಿಷ್ಠೆಯಾಗಿದೆ. ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ.
ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ 20 ಅಭ್ಯರ್ಥಗಳನ್ನು ಘೋಷಣೆ ಮಾಡಿದೆ. ಬೆಳಗಾವಿ 2, ಧಾರವಾಡ 2, ದಕ್ಷಿಣ ಕನ್ನಡ 2, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇನ್ನೂ ಅಭ್ಯರ್ಥಿಗಳು ಘೋಷಣೆಯಾಗಬೇಕಿದೆ.
ಅಭ್ಯರ್ಥಿಗಳ ಪಟ್ಟಿ: ಕೊಡಗು-ಸುಜಾ ಕುಶಾಲಪ್ಪ, ದಕ್ಷಿಣ ಕನ್ನಡ-ಕೋಟಾ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು- ಎಂ. ಕೆ. ಪ್ರಾಣೇಶ್, ಶಿವಮೊಗ್ಗ-ಡಿ. ಎಸ್. ಅರುಣ್, ಧಾರವಾಡ-ಪ್ರದೀಪ್ ಶೆಟ್ಟರ್, ಬೆಳಗಾವಿ -ಮಹಾಂತೇಶ ಕವಟಗಿಮಠ, ಗುಲಬರ್ಗಾ -ಬಿ. ಜಿ. ಪಾಟೀಲ್, ಚಿತ್ರದುರ್ಗ- ಕೆ. ಎಸ್. ನವೀನ್, ಮೈಸೂರು-ರಘು ಕೌಟಿಲ್ಯ, ಹಾಸನ-ವಿಶ್ವನಾಥ್, ಉತ್ತರ ಕನ್ನಡ- ಗಣಪತಿ ಉಳ್ವೇಕರ್, ಬೀದರ್ -ಪ್ರಕಾಶ್ ಖಂಡ್ರೆ, ಬೆಂಗಳೂರು-ಎಚ್. ಎಸ್. ಗೋಪಿನಾಥ ರೆಡ್ಡಿ, ಮಂಡ್ಯ-ಮಂಜು ಕೆ. ಆರ್. ಪೇಟೆ, ಕೋಲಾರ-ಡಾ. ಕೆ. ಎನ್. ವೇಣುಗೋಪಾಲ್,ರಾಯಚೂರು-ವಿಶ್ವನಾಥ್ ಎ. ಬನಹಟ್ಟಿ, ಬೆಂಗಳೂರು ಗ್ರಾಮಾಂತರ-ಬಿ. ಎಂ. ನಾರಾಯಣಸ್ವಾಮಿ, ಬಳ್ಳಾರಿ-ವೈ. ಎಂ. ಸತೀಶ್, ತುಮಕೂರು-ಎನ್. ಲೋಕೇಶ್, ಬಿಜಾಪುರ-ಪಿ. ಎಚ್. ಪೂಜಾರ್.



