ನಡೆದಾಡುವ ದೇವರು, ತ್ರಿವಿಧ ದಾಸೋಹಿ ಇಂದಿನ ಲಿಂ. ಡಾ. ಶಿವಕುಮಾರ ಸ್ವಾಮೀಜಿಗಳ ಶ್ರೀಗಳ ಜಯಂತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ವಂದನೆ ಸಲ್ಲಿಸಿದ್ದಾರೆ.
ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯಂದು ಅವರಿಗೆ ಬಾಗಿ ನಮಸ್ಕರಿಸುತ್ತೇನೆ. ಸಮಾಜ ಸೇವೆ ಮತ್ತು ಬಡವರ ಆರೈಕೆಗಾಗಿ ಅವರು ಮಾಡಿದ ಅಸಂಖ್ಯಾತ ಪ್ರಯತ್ನಗಳು ಚಿರಕಾಲ ನೆನೆಪಿನರಲ್ಲಿರುತ್ತವೆ. ನಿಮ್ಮ ಉದಾತ್ತ ಆಲೋಚನೆಗಳು ಮತ್ತು ಆದರ್ಶಗಳಿಂದ ನಾವು ಪ್ರೇರೆಪಿತವಾಗಿದ್ದೇವೆ ಎಂದು ಅವರು ಟ್ವೀಟ್ ಮೂಲಕ ಶ್ರೀಗಳನ್ನು ಸ್ಮರಿಸಿದ್ದಾರೆ.
I bow to His Holiness Dr. Sree Sree Sree Sivakumara Swamigalu on his Jayanti. His innumerable efforts to serve society and care for the poor are widely remembered. We are deeply inspired by his noble thoughts and ideals. pic.twitter.com/m3tV461wR3
— Narendra Modi (@narendramodi) April 1, 2021
‘ಭಕ್ತರ ಪಾಲಿಗೆ ನಡೆದಾಡುವ ದೇವರು ಎನಿಸಿದ್ದ, ತ್ರಿವಿಧ ದಾಸೋಹಿ, ಲಿಂಗೈಕ್ಯ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು, ಸಿದ್ದಗಂಗೆಯ ಆ ಮಹಾಸಾಧಕರಿಗೆ ಅನಂತ ಪ್ರಣಾಮಗಳು. ಅವರ ಜೀವನವೇ ಅವರ ಸಂದೇಶ, ಅವರು ನಡೆದ ದಾರಿಯೇ ಸಾಧನಾಪಥ, ಅವರ ಸಾಧನೆಗಳ ಪ್ರೇರಣೆಯಿಂದ ನಮ್ಮ ಬದುಕಿನಲ್ಲೂ ಸಾರ್ಥಕತೆ ಪಡೆಯೋಣ’ ಎಂದು ಸಿಎಂ ಯಡಿಯೂರಪ್ಪ ಅವರು ಶ್ರೀಗಳನ್ನು ಸ್ಮರಿಸಿದ್ದಾರೆ.
'ಭಕ್ತರ ಪಾಲಿಗೆ ನಡೆದಾಡುವ ದೇವರು ಎನಿಸಿದ್ದ, ತ್ರಿವಿಧ ದಾಸೋಹಿ, ಲಿಂಗೈಕ್ಯ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು, ಸಿದ್ದಗಂಗೆಯ ಆ ಮಹಾಸಾಧಕರಿಗೆ ಅನಂತ ಪ್ರಣಾಮಗಳು. ಅವರ ಜೀವನವೇ ಅವರ ಸಂದೇಶ, ಅವರು ನಡೆದ ದಾರಿಯೇ ಸಾಧನಾಪಥ, ಅವರ ಸಾಧನೆಗಳ ಪ್ರೇರಣೆಯಿಂದ ನಮ್ಮ ಬದುಕಿನಲ್ಲೂ ಸಾರ್ಥಕತೆ ಪಡೆಯೋಣ' : ಮುಖ್ಯಮಂತ್ರಿ @BSYBJP. pic.twitter.com/PcKcBck8cp
— CM of Karnataka (@CMofKarnataka) April 1, 2021
ಶ್ರೀಗಳ ಜಯಂತೋತ್ಸವ ಹಿನ್ನಲೆ ಮಠದಲ್ಲಿ ವಿಶೇಷ ಪೂಜೆ ಪುನಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್, ಸುತ್ತೂರು ಮಹಾಸಂಸ್ಥಾನದ ದೇಶೀಕೇಂದ್ರ ಸ್ವಾಮೀಜಿ, ಉಜ್ಜಯಿನಿ ಪೀಠದ 1008 ಜಗದ್ಗುರು ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಶಿಕ್ಷಣ, ಕಾಯಕ, ದಾಸೋಹದ ಮೂಲಕ ಶಿವಕುಮಾರ ಸ್ವಾಮೀಜಿಗಳು ನಡೆದಾಡುವ ದೇವರು ಎಂದೇ ಹೆಸರಾಗಿದ್ದರು. ನೂರ ಹನ್ನೊಂದು ವರ್ಷಗಳ ಕಾಲ ಬದುಕಿದ್ದ ಅವರು 2019ರಲ್ಲಿ ಲಿಂಗೈಕ್ಯರಾಗಿದ್ದರು.



