ಶಿವಮೊಗ್ಗ: ಸನಾತನ ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಕೆ ಭಾರೀ ವಿವಾದ ಸೃಷ್ಠಿಸಿದೆ. ಇದಕ್ಕೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದು, ನಮ್ಮದು ಲಿಂಗಾಯತ ಧರ್ಮ. ವೀರಶೈವ ಧರ್ಮ ನಡಿ ಎಂದು ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇ ಬೇಡಪ್ಪ, ನಮಗೆ ಯಾವ ಧರ್ಮ, ನಮ್ದು ಲಿಂಗಾಯತ ಧರ್ಮ ನಡಿ. ನಮ್ದು ವೀರಶೈವ – ಲಿಂಗಾಯತ ಧರ್ಮ. ಇಂಡಿಯಾವನ್ನ ಭಾರತ ಎಂದು ಬದಲಿಸೋದೂ ಕೂಡ, ಲಿಂಗಾಯತ – ವೀರಶೈವ ಎಂಬ ಎರಡು ಪದಗಳನ್ನು ಬೇರೆ ಮಾಡಿದಂತೆ. ಎರಡೂ ಒಂದೇ ಎಂದು ಹೇಳಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಇತ್ತು. ಈಗ ಪುನಃ ಕಾಂಗ್ರೆಸ್ ಅಧಿಕಾರ ಹಿಡಿದಿದೆ, ಬೇಡಿಕೆ ಇಲ್ಲವೇ ಎಂದು ಪ್ರಶ್ನಿಸಿದರೆ, ಹೌದು, ಆಗ ಇತ್ತು, ಈಗ ಒಬಿಸಿ ಕೋಟಾವನ್ನು ಲಿಂಗಾಯತರಿಗೆ ನೀಡಿ ಎಂದು ಬೇಡಿಕೆ ಇಡುತ್ತಿದ್ದೇವೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಉತ್ತರಿಸಿದ ಅವರು, ಆ ಮೈತ್ರಿ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದರು.



