ದಾವಣಗೆರೆ: ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ ಗಳ ನೋಂದಣಿ ಕಡ್ಡಾಯ; ನಿಯಮ ಪಾಲಿಸದ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಎಸಿ ದುರ್ಗಾಶ್ರೀ ಸೂಚನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ ಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು, ಮಾರ್ಗಸೂಚಿ ಪಾಲಿಸಬೇಕು.‌ ನಿಯಮ ಪಾಲಿಸದ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ಸೂಚನೆ ನೀಡಿದರು.

ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಸಂಸ್ಥೆಗಳು ಸರ್ಕಾರದ ಇ-ಕಲ್ಯಾಣಿ ಸಾಫ್ಟ್‌ವೇರ್ ನಲ್ಲಿ ನೋಂದಣಿ ಮಾಡದಿರುವ ಮತ್ತು ನಿಗದಿತ‌ನಿಯಮ ಪಾಲನೆ ಹಾಗೂ ದಾಖಲೆಗಳ ನಿರ್ವಹಿಸದಿರುವ ಆರೋಗ್ಯ ಸಂಸ್ಥೆಗಳ ವಿರುದ್ಧ ನೋಟಿಸ್ ಜಾರಿ ಮಾಡಿ
ಕ್ರಮ ಕೈಗೊಳ್ಳಬೇಕು.

ನಿಟ್ಟುವಳಿ ಇ.ಎಸ್.ಐ ಹಾಸ್ಪಿಟಲ್, ನಗರದ ಎಸ್.
ಎಸ್.ನಾರಾಯಣ ಹೃದಯಾಲಯ, ಹರಿಹರ ತಾಲೂಕಿನ ಜನನಿ ನರ್ಸಿಂಗ್ ಹೋಂ ಮತ್ತು ಅಕ್ಷಯ ಹಾಸ್ಪಿಟಲ್‌ ಗಳ‌ನೋಂದಣಿ ಅವಧಿ ಪೂರ್ಣಗೊಳಿಸಿದ್ದು,‌ನೋಂದಣಿ ನವೀಕರಣಕ್ಕಾಗಿ 30 ದಿನಗಳು ಮುಂಚಿತವಾಗಿ ಮನವಿ ಸಲ್ಲಿಸದೇ ಡಿ.ಡಿ. ಮೊತ್ತ ರೂ.17,500‌ನವೀಕರಿಣಕ್ಕೆ ಸಲ್ಲಿಸಿದ್ದು, ಕೆ.ಪಿ.ಎಂ.ಇ ನೋಂದಣಿ
ಮುಕ್ತಾಯಗೊಂಡಿರುವ ಪ್ರತಿಯನ್ನು ಅಂತರ್ಜಾಲದಲ್ಲಿ‌ ಮನವಿ ಸಲ್ಲಿಸಿದ್ದಾರೆ.

ಪಿ.ಸಿ..ಪಿ.ಎನ್.ಡಿ.ಟಿಚನ್ನಗಿರಿ ತಾಲೂಕಿನಲ್ಲಿರುವ ಶ್ರೀ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಅಂಡ್ ಟ್ರಾಮಾ ಕೇರ್, ಜಗಳೂರು‌ ತಾಲೂಕಿನ ರಾಘವ ಡಯಾಗೋಸ್ಟಿಕ್ ಸೆಂಟರ್‌ ಅಂಡ್
ಪಾಲಿ ಕ್ಲಿನಿಕ್ ಮತ್ತು ನಗರದ ಎ.ವಿ.ಕೆ ಕಾಲೇಜು
ರಸ್ತೆಯಲ್ಲಿರುವ ಶ್ರೀ ಭಗವಾನ್ ಜೈನ್ ಹಾಸ್ಪಿಟಲ್ ಇವುಗಳು ಹೊಸದಾಗಿ ನೋಂದಣಿ ಮಾಡುವ ಸಂಸ್ಥೆಗಳು ಎಂದರು.

ಡಯಾಗೊಸ್ಟಿಕ್ ಸೆಂಟರ್‌ ನೋಂದಣಿ, ನವೀಕರಣ‌ ಇಂತಹವುಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳದೇ, ಲಿಂಗ ಪತ್ತೆ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕಾಯ್ದೆ‌‌ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು. ಆದ್ದರಿಂದ‌ ಮುಂದಿನ ಸಭೆಯೊಳಗಾಗಿ ಒಂದೆರಡು ಲಿಂಗ ಪತ್ತೆ‌ಪರೀಕ್ಷೆ ಮಾಡುವವರ ಹಾಗೂ ಹೆಣ್ಣು ಭ್ರೂಣಗರ್ಭಪಾತ‌ ಮಾಡಿಸಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ‌ಯಾಗಿಸಿದರೆ ಇತರರು ಎಚ್ಚೆತ್ತುಕೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ‌ಡಾ.ಎಸ್.ಷಣ್ಮುಖಪ್ಪ, ರುದ್ರಸ್ವಾಮಿ, ರೇಡಿಯಾಲಜಿಸ್ಟ್ ಡಾ.ಎಲ್.ಸುಮಿತ್ರಾ,‌ಡಾ.ಭಾರತಿ ಇತ್ತಿತರರು ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *