ದಾವಣಗೆರೆ : ಬೆಸ್ಕಾಂನ 66/11 ಕೇಂದ್ರದಿಂದ ಹೊರಡುವ ಜಿ & ಎಸ್ ಹಾಗೂ ಜಯನಗರ ಫೀಡರ್ ಗಳಲ್ಲಿ ಬೆಸ್ಕಾಂ ಮತ್ತು ಕೆ.ಯು.ಐ.ಡಿ.ಎಫ್ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಇಂದು (ಜ.29 ) ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಜಿ & ಎಸ್. ಫೀಡರ್ನ ವ್ಯಾಪ್ತಿಯ ಗಣೇಶ ಲೇಔಟ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಭಗತ್ ಸಿಂಗ್ ನಗರ, ಈರುಳ್ಳಿ ಮಾರ್ಕೆಟ್, ಪಿ.ಬಿ.ರಸ್ತೆಯ ನೀಲಮ್ಮನ ತೋಟದಿಂದ ಸುಲ್ತಾನ್ ಗೋಲ್ಡ್ ವರೆಗೆ, ದಿಬ್ದಳ್ಳಿ ಕಾಂಪೌಂಡ್, ರೈತ ಸಂಘ, ಪದ್ಮಾಂಜಲಿ, ಪುಷ್ಪಾಂಜಲಿ, ಗೀತಾಂಜಲಿ ಟಾಕೀಸ್, ರೈಲ್ವೇ ಗೇಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಜಯನಗರ ಫೀಡರ್ನ ವ್ಯಾಪ್ತಿಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಯನಗರ ಸಿ ಬ್ಲಾಕ್,ಭಗೀರಥ ಸರ್ಕಲ್, ಜಯನಗರ ಚರ್ಚ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



