Connect with us

Dvgsuddi Kannada | online news portal | Kannada news online

ಪಂಚಮಸಾಲಿ ಮೀಸಲಾತಿ ಪಾದಯಾತ್ರೆಗೆ ವಚನಾನಂದ ಶ್ರೀ ಬೆಂಬಲ; ಒಂದಾದ ಹರಿಹರ, ಕೂಡಲ ಸಂಗಮ ಪೀಠ

ಪ್ರಮುಖ ಸುದ್ದಿ

ಪಂಚಮಸಾಲಿ ಮೀಸಲಾತಿ ಪಾದಯಾತ್ರೆಗೆ ವಚನಾನಂದ ಶ್ರೀ ಬೆಂಬಲ; ಒಂದಾದ ಹರಿಹರ, ಕೂಡಲ ಸಂಗಮ ಪೀಠ

ದಾವಣಗೆರೆ: ಪಂಚಮಸಾಲಿ ಪಾದಯಾತ್ರೆಗೆ ವಚನಾನಂದ ಸ್ವಾಮೀಜಿ ಬೆಂಬಲ ನೀಡಿದ್ದು, ಹರಪನಹಳ್ಳಿಯಲ್ಲಿ ಸಮಾವೇಶದಲ್ಲಿ ಕೂಡಲ  ಸಂಗಮ , ಹರಿಹರ ಪೀಠಗಳ ಸಮಾಗಮವಾಗಿದೆ.

ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪ್ರಕಟಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೇವೆ. ಮೀಸಲಾತಿ ಪ್ರಕಟಿಸದಿದ್ದರೆ ಇದೇ 29 ರಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

FB IMG 1611629789973

ಸಿಎಂ ಯಡಿಯೂರಪ್ಪ ಅವರು ನಮ್ಮವರು ಎಂಬ ಕಾರಣಕ್ಕಾಗಿ ಈ ಹಿಂದೆ ಉಪವಾಸ ಸತ್ಯಾಗ್ರಹವನ್ನ ಹಿಂದೆ ಪಡೆದಿದ್ದೆ. ಆದರೆ ಈಗ ನನ್ನ ಪಾದಯಾತ್ರೆ ನಿಲ್ಲಿಸಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಒಬ್ಬ ವ್ಯಕ್ತಿ ಹುತಾತ್ಮರಾಗಿದ್ದಾರೆ. ಮೀಸಲಾತಿ ಸಿಗುವ ತನಕ ಹೋರಾಟ ನಿರಂತರ ನಡೆಯಲಿದೆ. ನಮ್ಮ ಪಾದಯಾತ್ರೆ ಹರಪನಹಳ್ಳಿಯಿಂದ ದಾವಣಗೆರೆ ತಲುಪುವುದರೊಳಗೆ ಸಿಎಂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪ್ರಕಟಿಸಲಿ ಎಂದು ಹರಪನಹಳ್ಳಿ ಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

n2487736143cd9b16a1a796f11371c44d92c9ed6f114c5224e12d5edeb5af36cb11e50e443

 

ನಂತರ ಮಾತನಾಡಿದ ವಚನಾನಂದ ಸ್ವಾಮೀಜಿ, ಹರಿಹರ ಹಾಗೂ ಕೂಡಲ ಸಂಗಮ ಪಂಚಮಸಾಲಿ ಗುರುಪೀಠಗಳು ಒಂದಾಗಿವೆ. ಇಡೀ ಪಂಚಮಸಾಲಿ ಸಮಾಜಕ್ಕೆ ಎರಡು ಪೀಠಗಳು ಎರಡು ಕಣ್ಣುಗಳಿದ್ದ ಹಾಗೆ. ಇದರಲ್ಲಿ ಯಾರೂ ತಮ್ಮ ಬೇಳೆ ಬೆಳೆಸಿಕೊಳ್ಳುವುದು ಬೇಡ. ನಾನು ಮತ್ತು ಜಯಮೃತ್ಯುಂಜಯ ಸ್ವಾಮೀಜಿ 21 ವರ್ಷದಿಂದ ಸ್ನೇಹಿತರು. ನಾನು ನೇರವಾಗಿ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಹೇಳುವೆ.ನಾವು ಒಂದಾಗಿದ್ದೇವೆ, ಯಾರ ಮಾತನ್ನೂ ಕೇಳುವುದು ಬೇಡ ಎಂದಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top