Connect with us

Dvgsuddi Kannada | online news portal | Kannada news online

15 ವರ್ಷಕ್ಕೂ ಮೇಲ್ಪಟ್ಟ ವಾಹನಗಳ RC ನವೀಕರಣಕ್ಕೆ ಭಾರೀ ಪ್ರಮಾಣದಲ್ಲಿ ಶುಲ್ಕ ಏರಿಕೆ ..!

ಪ್ರಮುಖ ಸುದ್ದಿ

15 ವರ್ಷಕ್ಕೂ ಮೇಲ್ಪಟ್ಟ ವಾಹನಗಳ RC ನವೀಕರಣಕ್ಕೆ ಭಾರೀ ಪ್ರಮಾಣದಲ್ಲಿ ಶುಲ್ಕ ಏರಿಕೆ ..!

ನವದೆಹಲಿ : ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ನೂತನ ಗುಜರಿ  ನೀತಿಯನ್ನು ಪರಿಚಯಿಸಿದೆ. ಈ ನೂತನ ನೀತಿ ಅನ್ವಯ ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ, ಹೊಸ ವಾಹನ ಖರೀದಿ ಮೇಲೆ ಉತ್ತಮ ರಿಯಾಯಿತಿ ಸಿಗಲಿದೆ. ಆದರೆ, ಹಳೆಯ ವಾಹನಗಳ ಫಿಟ್ನೆಸ್ ದೃಢೀಕರಣ ಪತ್ರವನ್ನು ನವೀಕರಣ ಮಾಡಲು ಇದೀಗ ಭಾರೀ ಪ್ರಮಾಣದಲ್ಲಿ ನವೀಕರಣ ಶುಲ್ಕ ಹೆಚ್ಚಿಸಲಾಗಿದೆ.

15 ವರ್ಷ ಹಳೆಯ ವಾಹನಗಳ ಆರ್ ಸಿ ನವೀಕರಣದ ಶುಲ್ಕ ಹೆಚ್ಚಳದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಹೊಸ ಕರಡು ಅಧಿಸೂಚನೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅಂದರೆ, ಅಕ್ಟೋಬರ್ 1, 2021ರಿಂದ  ವಾಹನಗಳ ನೋಂದಣಿ ಪ್ರಮಾಣ ಪತ್ರಗಳನ್ನು ನವೀಕರಿಸುವುದು. ಈ ಏರಿಕೆಯು ಖಾಸಗಿ ವಾಹನಗಳಿಗೆ ಮಾತ್ರವಲ್ಲದೆ, ಭಾರತದ ವಾಣಿಜ್ಯ ವಾಹನಗಳಿಗೂ ಸಹ ಅನ್ವಯವಾಗಲಿದೆ.

ಈ ನೂತನ ನೀತಿ ಜಾರಿಯಾದರೆ, 15 ವರ್ಷಕ್ಕಿಂತ ಹಳೆಯ ಕಾರ್‌ನ ನೋಂದಣಿ ನವೀಕರಣಕ್ಕೆ 5,000 ರೂ. ಪಾವತಿಸಬೇಕಾಗಬಹುದು. ಇದು ನೀವು ಪ್ರಸ್ತುತ ಪಾವತಿಸುತ್ತಿರುವ ಮೊತ್ತಕ್ಕಿಂತ ಸುಮಾರು ಎಂಟು ಪಟ್ಟು ಅಧಿಕವಾಗಲಿದೆ.  ಇದೇ ರೀತಿ, ಹಳೆಯ ಬೈಕ್‌ಗಳ ನೋಂದಣಿ ನವೀಕರಣಕ್ಕೆ ಪ್ರಸ್ತುತ 300 ರೂ. ಹಳೆಯ  ಶುಲ್ಕವಿದ್ದು, ಅದು 1000 ರೂಪಾಯಿಗೆ ಹೆಚ್ಚಲಿದೆ.  ಇನ್ನೂ15 ವರ್ಷ ದಾಟಿದ ಬಸ್ ಅಥವಾ ಟ್ರಕ್‌ನಂತಹ ದೊಡ್ಡ ವಾಹನಗಳ ಫಿಟ್ನೆಸ್ ನವೀಕರಣಕ್ಕೆ ತಗುಲುವ ವೆಚ್ಚ 12,500 ರೂಪಾಯಿ ಆಗಲಿದೆ.ಮೋಟಾರು ಸೈಕಲ್ ಗಳಿಗೆ, ನೋಂದಣಿ ಪ್ರಮಾಣ ಪತ್ರ ನವೀಕರಣಕ್ಕೆ ಅರ್ಜಿ ಸಲ್ಲಿಸುವ ವಿಳಂಬವು ಪ್ರತಿ ತಿಂಗಳ ವಿಳಂಬ ಅಥವಾ ಅದರ ಒಂದು ಭಾಗಕ್ಕಾಗಿ  300 ಹೆಚ್ಚುವರಿ ಶುಲ್ಕ ತೆರಬೇಕಾಗಿದೆ.

ಪ್ರತಿ ತಿಂಗಳೂ ವಿಳಂಬಕ್ಕೆ  500 ಅಥವಾ ಅದರ ಭಾಗವು ಸಾರಿಗೆ ವಾಹನಗಳ ಇತರ ವರ್ಗಗಳಿಗೆ ಸಂಬಂಧಿಸಿದಂತೆ ವಿಧಿಸಲಿದೆ. ನೋಂದಣಿ ಪ್ರಮಾಣಪತ್ರವು ನಮೂನೆಯಲ್ಲಿ ನೀಡಲಾದ ಅಥವಾ ನವೀಕರಿಸಿದ ಸ್ಮಾರ್ಟ್ ಕಾರ್ಡ್ ಪ್ರಕಾರವಾಗಿದ್ದರೆ ವಾಹನ ಮಾಲೀಕರು 200 ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.ದೇಶದಲ್ಲಿ ವಾಹನಗಳ ಮಾಲಿನ್ಯಕಾರಕ  ನಿಯಂತ್ರಣ ಭಾಗವಾಗಿ ಈ  ಪ್ರಸ್ತಾಪವಾಗಿದೆ. ಈ ನಿಟ್ಟಿನಲ್ಲಿ ಇತರ ಪ್ರಯತ್ನಗಳು ಹೊಸದಾಗಿ ಘೋಷಿಸಲ್ಪಟ್ಟ ವಾಹನ ರದ್ದತಿ ನೀತಿ ಮತ್ತು ಹಳೆಯ ವಾಹನಗಳ ಬಳಕೆ ತಗ್ಗಿಸುವುದು ನೀತಿಯ ಉದ್ದೇಶವಾಗಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top