ರೈತರಿಗೆ ಗುಡ್ ನ್ಯೂಸ್: ಸತತ ಮೂರನೇ ವರ್ಷವೂ ಉತ್ತಮ ಮುಂಗಾರು ಮಳೆ; ತಜ್ಞರ ವಿಶ್ವಾಸ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಹೊಸದಿಲ್ಲಿ: ದೇಶದಲ್ಲಿ ಸತತ ಎರಡನೇ ವರ್ಷ ವಾಡಿಕೆಯ ಮುಂಗಾರು ಮಳೆ ಬಿದ್ದಿದ್ದು, ಉತ್ತಮ ಬೆಳೆಯಾಗಿದೆ.  ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಕೃಷಿ ಚಟುವಟಿಕೆಗೆ ಹಿನ್ನೆಲೆಯಾಗಿಲ್ಲ. ಕೃಷಿ ಕ್ಷೇತ್ರ  ಆಥಿಕ ಪುನಶ್ಚೇತನಕ್ಕೆ ನೆರವಾಗಿದೆ.

ಈ ವರ್ಷ ಕೂಡ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಉತ್ತಮ ಮಳೆ ಯಾಗಲಿದೆ. ಅಂಕಿ ಅಂಶಗಳ ಪ್ರಕಾರ ಸತತ ಮೂರು ವರ್ಷ ವಾಡಿಕೆಯ ಮಳೆಯಾಗುವುದು ತೀರಾ ಅಪರೂಪ. ಕಳೆದ ಎರಡು 20 ವರ್ಷಗಳಲ್ಲಿ  ಒಂದು ಬಾರಿ ಮಾತ್ರ ಸತತ ಮೂರು ವರ್ಷ ವಾಡಿಕೆ ಮಳೆ ಬಿದ್ದಿದೆ. ಆದ್ರೀಗ 2021ರ ಮುಂಗಾರು ಮಳೆ ಕೂಡಾ ಆಶಾದಾಯಕವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆರ್ಥಿಕ ಹಿಂಜರಿತದಿಂದ ಹೊರಬರುವ ಪ್ರಯತ್ನದಲ್ಲಿರುವ ಭಾರತಕ್ಕೆ ಉತ್ತಮ ಮಳೆ ವರದಾನವಾಗಬಲ್ಲದು ಎಂಬುದು ತಜ್ಞರ ಅಭಿಪ್ರಾಯ.  ದೇಶದಲ್ಲಿ ಮೂರನೇ ಎರಡರಷ್ಟು ಮಂದಿ ಕೃಷಿ ಆಧಾರಿತ ಆದಾಯವನ್ನು ಅವಲಂಬಿಸಿರುವುದರಿಂದ ಮತ್ತು ಶೇಕಡ 40ರಷ್ಟು ಬಿತ್ತನೆ ಪ್ರದೇಶಕ್ಕೆ ಯಾವುದೇ ನೀರಾವರಿ ಸೌಕರ್ಯ ಇಲ್ಲದಿರುವುದರಿಂದ ದೇಶದಲ್ಲಿ ಉತ್ತಮ ಮುಂಗಾರು ಅನಿವಾರ್ಯವಾಗಿದೆ.  ಭತ್ತ, ಕಬ್ಬು, ಹತ್ತಿ, ಬೇಳೆಕಾಳುಗಳು, ತೋಟಗಾರಿಕೆ ಉತ್ಪನ್ನಗಳ ುತ್ತಮ ಮುಂಗಾರು ಮಳೆ ಅಗತ್ಯವಾಗಿದೆ.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *