ಬೆಂಗಳೂರು : ಬಿಎಂಆರ್ ಸಿ ಎಲ್ ಹುದ್ದೆ ಭರ್ತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಹುದ್ದೆಗಳ ಭರ್ತಿಯ ಅಧಿಕಾರವನ್ನು ನಿರ್ದೇಶಕರ ಬದಲು ವ್ಯವಸ್ಥಾಪಕ ನಿರ್ದೇಶಕರಿಗೆ ವಹಿಸಲಾಗುತ್ತದೆ ಎಂಬುದಾಗಿ ಗೃಹ ಬಸವರಾಜ್ ಬೊಮ್ಮಾಯಿ ಹೇಳಿದರು.
ವಿಧಾನಪರಿಷತ್ ನಲ್ಲಿ ನಮ್ಮ ಮೆಟ್ರೋ ನೇಮಕಾತಿಯಲ್ಲಿ ಕನ್ನಡಿಗರ ಕಡೆಗಣನೆ ಕುರಿತು ಸದಸ್ಯ ಕಾಂತರಾಜ್ ಪ್ರಶ್ನಿಸಿದ್ದರು. ಸಿಎಂ ಪರವಾಗಿ ಉತ್ತರಿಸಿದ ಬೊಮ್ಮಾಯಿ, ಸದ್ಯ ನಿರ್ದೇಶಕರು ಸಿಬ್ಬಂದಿ ನೇಮಕಾತಿ ಮಾಡುತ್ತಿದ್ದಾರೆ. ಈ ಅಧಿಕಾರವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ವರ್ಗಾವಣೆ ಮಾಡಲಾಗುತ್ತದೆ. ನೇಮಕ ಅಧಿಕಾರ ಎಂ.ಡಿ ನಿಯಂತ್ರಣಕ್ಕೆ ತಂದು ಕನ್ನಡಿಗರಿಗೆ ಆದ್ಯತೆ ನೀಡವ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.



