Connect with us

Dvgsuddi Kannada | online news portal | Kannada news online

ಯಶಸ್ವಿನಿ ಯೋಜನೆ ನೋಂದಣಿ ನಿರೀಕ್ಷೆ ಮೀರಿ ಸಾಧನೆ; ಮಾ.31 ನೋಂದಣಿಗೆ ಕೊನೆಯ ದಿನ

images 49 1

ಪ್ರಮುಖ ಸುದ್ದಿ

ಯಶಸ್ವಿನಿ ಯೋಜನೆ ನೋಂದಣಿ ನಿರೀಕ್ಷೆ ಮೀರಿ ಸಾಧನೆ; ಮಾ.31 ನೋಂದಣಿಗೆ ಕೊನೆಯ ದಿನ

ಬೆಂಗಳೂರು: ರೈತರು, ಸಹಕಾರಿ ಸಂಸ್ಥೆ ಸದಸ್ಯರಿಗೆ ಯಶಸ್ವಿನಿ ಯೋಜನೆಯಡಿ 30 ಲಕ್ಷ ಸದಸ್ಯರ ನೋಂದಣಿಯ ಗುರಿಯನ್ನು ಹೊಂದಲಾಗಿತ್ತು.ಇದೀಗ 36.50 ಲಕ್ಷ ಸದಸ್ಯರು ನೋಂದಾಯಿಸಿ, ಗುರಿ ಮೀರಿದ ಸಾಧನೆ ಮಾಡಲಾಗಿದೆ. ಮಾರ್ಚ್ 31ರವರೆಗೆ ಹೊಸ ಸದಸ್ಯರ‌‌ನ್ನು ನೋಂದಾಯಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯಡಿ 5 ಲಕ್ಷ ವರೆಗೆ ಆರೋಗ್ಯ ಚಿಕಿತ್ಸೆ ಸೌಲಭ್ಯ ಪಡೆಯಬಹುದಾಗಿದೆ.

ಈ ಬಗ್ಗೆ ಸಹಕಾರ ಇಲಾಖೆಯಿಂದ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರ ನಿಗದಿಪಡಿಸಿದಂತೆ ದಿನಾಂಕ 01-01-2023ರಿಂದಲೇ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ 5,084 ಫಲಾನುಭವಿಗಳು ಅಂದಾಜು ರೂ.9.55 ಕೋಟಿ ಮೊತ್ತದ ಚಿಕಿತ್ಸೆಗಳನ್ನು ರಾಜ್ಯಾಧ್ಯಂತ ಪಡೆದಿದ್ದಾರೆ.

ಜನವರಿ 2023ರಿಂದ ಚಿಕಿತ್ಸೆಯನ್ನು ಪ್ರಾರಂಭಿಸಿದ ಅತ್ಯಲ್ಪ ಅವಧಿಯಲ್ಲೇ 5 ಸಾವಿರ್ಕಕೂ ಹೆಚ್ಚು ಫಲಾನುಭವಿಗಳು ಚಿಕಿತ್ಸೆ ಪಡೆದಿರುವುದು, ಈ ಯೋಜನೆಗೆ ದೊರೆತ ಅಭೂತಪೂರ್ವ ಸ್ಪಂದನೆ ಆಗಿರುತ್ತದೆ. ಸರ್ಕಾರವು ಫಲಾನುಭವಿಗಳ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚವನ್ನು ಫರಿಸಲು ಪ್ರಸಕ್ತ ಸಾಲಿಗೆ ಆಯವ್ಯಯದಲ್ಲಿ ಒದಗಿಸಿದ ಅನುದಾನದ ಪೂರ್ಣ ಮೊತ್ತ ರೂ.100 ಕೋಟಿಗಳನ್ನು ಬಿಡುಗಡೆ ಮಾಡಿರುತ್ತದೆ. ಇಲ್ಲಿಯವರೆಗೆ ಸದಸ್ಯತ್ವ ನೊಂದಣಿ ವಂತಿಗೆ ರೂ.49.60 ಕೋಟಿ ಸಂಗ್ರಹಣೆ ಆಗಿರುತ್ತದೆ ಎಂದು ತಿಳಿಸಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

davangere mahanagara palike dvgsuddi
davangere lokayukta 2
Morarji Desai school 1
davangere lokayukta visit 1
lokayukta visit
Advertisement
Advertisement Enter ad code here

Title

To Top