ಸಿರಿಗೆರೆ: ಐತಿಹಾಸಿಕ ತರಳಬಾಳು ಹುಣ್ಣಿಮೆ ಮಹೋತ್ಸವ-2021 ಸರಳವಾಗಿ ಆನ್ ಲೈನ್ ಮುಖಾಂತ ಆಚರಿಸಲಾಗುತ್ತಿದೆ. ಕೊರೊನಾ ಕಾರಣದಿಂದ ಕೊಟ್ಟೂರಲ್ಲಿ ಆಚರಿಸಿದ್ದಬೇಕಿದ್ದ ಹುಣ್ಣಿಮೆ ಮಹೋತ್ಸವ ರದ್ದುಗೊಳಿಸಲಾಗಿತ್ತು. ಸಂಪ್ರದಾಯದಂತೆ ಸರಳವಾಗಿ ಸಿರಿಗೆರೆಯ ತರಳಬಾಳು ಬೃಹನ್ಮಠದ ಗುರುಶಾಂತೇಶ್ವರ ಭವನದಲ್ಲಿ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸದ್ಧರ್ಮ ಸಿಂಹಾಸನಾರೋಹಣ ಮಾಡಲಿದ್ದಾರೆ. ನಂತರ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮ ನೇರ ಪ್ರಸಾರವನ್ನು ಯುಟ್ಯೂಬ್ ನಲ್ಲಿ Taralabalu Math Sirigere ಚಾಲನ್ ನಲ್ಲಿ ಲೈವ್ ಸ್ಟ್ರಿಮಿಂಗ್ ವೀಕ್ಷಿಸಬಹುದಾಗಿದೆ ಅಥವಾ ಈ ಲಿಂಕ್ https://www.youtube.com/channel/UCuUAJc9ydIUh7RfObIl_4mg ಕ್ಲಿಕ್ ಮಾಡುವ ಮೂಲಕವೂ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.