ಬೆಂಗಳೂರು: ರಾಜ್ಯದಲ್ಲಿ ಆಲಿಕಲ್ಲು ಮಳೆ ಕಳೆದ ಮೂರು ದಿನದಿಂದ ಅಬ್ಬರಿಸುತ್ತಿದೆ. ಈ ಮಳೆಯಿಂದ ಬಿರು ಬೇಸಿಗೆ ನಡುವೆ ಒಂದು ರೀತಿ ಮಳೆಗಾಲ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕದ ಒಳನಾಡಿನಲ್ಲಿ ಬಹುತೇಕ ಜಿಲ್ಲೆಯಲ್ಲಿ ಮಳೆಯಾಗಿತ್ತಿದೆ.
ಉಪಚುನಾವಣೆ ಬಿಜೆಪಿ ಟಿಕೆಟ್ ಘೋಷಣೆ: ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ್ ದಾಸಕರಿಯಪ್ಪ; ಬಾಗಲಕೋಟೆಗೆ ವೀರಣ್ಣ ಚರಂತಿಮಠ್
ಈ ಮಳೆಗೆ ಕಾರಣ ಏನು..?
ಈ ಅಕಾಲಿಕ ಮಳೆಗೆ ಕಾರಣ ಏನು ಎಂಬುದನದನು ನೋಡುವುದಾದರೆ, ವಾತಾವರಣದಲದಲಿ ಟ್ರಫ್ (ಮೇಲ್ಮೈ ಸುಳಿಗಾಳಿ) ಉಂಟಾಗಿದೆ. ಇದರ ಕಾರಣದಿಂದ ವ್ಯತ್ಯಾಸ ಉಂಟಾಗಿ ಬಿರಿಗಾಳಿ ಸಹಿತ ಆಲಿಕಲ್ಲು ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿ ಆಲಿಕಲ್ಲು ಮಳೆಯಂಥ ಪ್ರಕ್ರಿಯೆ ಘಟಿಸುತ್ತದೆ. ಆದರೆ, ಈ ವರ್ಷ ರಾಜ್ಯದ ಒಳನಾಡಿನ ತುಂಬಾ ಮೇಲ್ಮೈ ಸುಳಿಗಾಳಿ ಇರುವುದರಿಂದ ಹಲವು ಪ್ರದೇಶಗಳು ಆಲಿಕಲ್ಲು ಮಳೆಯಾಗುತ್ತಿದೆ. ಈ ಮಳೆ ಮಾ.22ರವರೆಗೆ ಮುಂದುವರಿಯಲಿದೆ ಎಂಬ ಮುನ್ಸೂಚನೆ ನೀಡಿದೆ.
ಈ ಅಕಾಲಿಕ ಮಳೆಯಿಂದಾಗಿ ತಾಪಮಾನದಲ್ಲಿ ಒಂದಿಷ್ಟು ಇಳಿಕೆಯಾಗಿದ್ದರೂ, ಬೆಳೆಗಳಿಗೆ ಹಾನಿಯಾಗಿಉಂಟಾಗಿದೆ.ರಾಜ್ಯದ ರೈತರು ಕಂಗಾಲಾಗಿದ್ದಾರೆ.
ಎಲ್ಲೆಲ್ಲಿ ಮಳೆ..?
ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಉತ್ತರ ಒಳನಾಡಿನ ಕಲಬುರಗಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಗದಗ ಮತ್ತು ಧಾರವಾಡ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಮಂಡ್ಯ ಜಿಲ್ಲೆಯ ಒಂದೆರಡು ಕಡೆ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಮಳೆಯಾಗುವ ಸಂಭವವಿದೆ.
ಯುಗಾದಿಗೂ ಮುನ್ನ ರಾಜ್ಯಾದ್ಯಂತ ಸುರಿದ ಮಳೆಗೆ ರೈತರ ಬೆಳೆಗಳು ಹಾನಿಯಾಗಿವೆ. ಪ್ರಮುಖವಾಗಿ ಮಾವು, ಹಲಸು, ಕಲ್ಲಂಗಡಿ, ಜೋಳ ಸೇರಿ ಇತರ ಬೆಳೆಗಳು ತೀವ್ರ ಮಳೆಯಿಂದ ಹಾನಿಯಾಗಿವೆ. ಕಲಬುರಗಿ, ಧಾರವಾಡ, ವಿಜಯಪುರ, ಹಾವೇರಿ, ರಾಯಚೂರು, ಗದಗ, ದಾವಣಗೆರೆ ಭಾಗದಲ್ಲಿನ ಜೋಳ ಬೆಳೆಯುತ್ತಿದ್ದು, ಜೋಳ ಕಟಾವು ಮಾಡಲು ಮುಂದಾಗುವ ವೇಳೆ ಮಳೆಯಾಗಿ ಜೋಳದ ತೆನೆ ಹೊಲದಲ್ಲಿ ಬಿದ್ದಿವೆ. ಇದರಿಂದ ಈ ಬಾರಿ ರೈತರಿಗೆ ಹಾನಿ ಉಂಟಾಗಿದೆ.



