ಬೆಂಗಳೂರು: ಕಳೆದ 20 ದಿನದಿಂದ ಕಣ್ಮೆರೆಯಾಗಿದ್ದ ಮಳೆ, ಮತ್ತೆ ಶುರುವಾಗಿದೆ. ಮುಂದಿನ ಮೂರ್ನಾಲ್ಕು ದಿನ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಬಿತ್ತನೆ ಮಾಡಿ ಅಕಾಶದ ಕಡೆಗೆ ಮುಖ ಮಾಡಿದ್ದ ರೈತನಿಗೆ ತುಸು ನೆಮ್ಮದಿ ತಂದಿದೆ.ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಲಿದ್ದು, ವಿಜಯಪುರ ದಕ್ಷಿಣ ಕನ್ನಡ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು. ಕಲಬುರಗಿ, ಕೊಪ್ಪಳ ಬೆಳಗಾವಿ, ಬೀದರ್, ಧಾರವಾಡ, ಗದಗ, ವಿಜಯನಗರ ಜಿಲ್ಲೆ ಸೇರಿ ಬಹುತೇಕ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗಲಿದೆ.



