Connect with us

Dvgsuddi Kannada | online news portal | Kannada news online

ರಾಜ್ಯಕ್ಕೆ ಕರೆಂಟ್ ಶಾಕ್; ನ. 01ರಿಂದಲೇ ದರ ಹೆಚ್ಚಳ

ಪ್ರಮುಖ ಸುದ್ದಿ

ರಾಜ್ಯಕ್ಕೆ ಕರೆಂಟ್ ಶಾಕ್; ನ. 01ರಿಂದಲೇ ದರ ಹೆಚ್ಚಳ

ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾದಿಂದ ವಿದ್ಯುತ್ ದರ ಹೆಚ್ಚಳಕ್ಕೆ ತಡೆ ನೀಡಿದ್ದ ಸರ್ಕಾರ, ಇದೀಗ ವಿದ್ಯುತ್ ದರ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಜನರಿಗೆ ಪವರ್  ಶಾಕ್ ನೀಡಿದೆ.

ಪ್ರತಿ ಯೂನಿಟ್ ಗೆ  40 ಪೈಸೆ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಿದೆ. ಕೆಇಆರ್ ಸಿ ಮೂಲಕ ದರ ಹೆಚ್ಚಳ ಆದೇಶ ಹೊರಡಿಸಿದೆ.  ನವೆಂಬರ್ 01 ರಿಂದ ಅನ್ವಯವಾಗುವಂತೆ ದರ ಪರಿಷ್ಕರಣೆಗೊಂಡಿದೆ. ಈ ಮೂಲಕ ಕೊರೊನಾ ಸಂಕಷ್ಟದ ಮಧ್ಯೆ ಸರ್ಕಾರ ಜನರಿಗೆ ಮತ್ತೊಂದು ಸಂಕಷ್ಟ ನೀಡಿದೆ. ಮಾರ್ಚ್ ತಿಂಗಳಲ್ಲಿ ಏರಿಕೆಯಾಗಬೇಕಿದ್ದ ದರ, ಕೊರೊನಾ ಸಂಕಷ್ಟದಿಂದ ತಡೆಹಿಡಿಯಲಾಗಿತ್ತು. ಇದೀಗ ದರ  ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top