ದಾವಣಗೆರೆ ಶುಗರ್ಸ್ : ಮೆಕ್ಕೆಜೋಳಕ್ಕೆ 2400 ದರದಂತೆ 2 ಸಾವಿರ ಕ್ವಿಂಟಾಲ್ ಖರೀದಿ; ಇಂದಿನಿಂದ ನೋಂದಣಿ ಶುರು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಮುಂಗಾರು ಹಂಗಾಮಿನಲ್ಲಿ ಮಾರುಕಟ್ಟೆ ಮಧ್ಯಪ್ರವೇಶದಡಿ (ಪಿಡಿಪಿಎಸ್) ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಜನವರಿ 8 ರಿಂದ ಪ್ರಾರಂಭಿಸಲಾಗಿದೆ. ಇದುವರೆಗೆ 3412 ಜನ ರೈತರು 110762 ಕ್ಕಿಂಟಾಲ್‌ಗಳಿಗೆ ನೋಂದಣಿ ಮಾಡಿಸಿರುತ್ತಾರೆ. ಈ ಪೈಕಿ 2343 ಜನ ರೈತರು ಒಟ್ಟು 87258 ಕ್ವಿಂಟಾಲ್ ಮೆಕ್ಕೆಜೋಳವನ್ನು ಜಿಲ್ಲೆಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಪಿಡಿಪಿಎಸ್ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ದಾವಣಗೆರೆ: ಏರುತ್ತಲೇ ಇಲ್ಲ ಅಡಿಕೆ ಬೆಲೆ; ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ…?

ರೈತರಿಂದ ನೋಂದಣಿ ಅವಕಾಶ

ಜಿಲ್ಲೆಯಲ್ಲಿ ವಿವಿಧ ಕುಕ್ಕುಟ ಆಹಾರ ಉತ್ಪಾದಕ ಘಟಕಗಳಿಗೆ 91 ಜನ ರೈತರಿಂದ 2712 ಕ್ವಿಂಟಲ್ ಮೆಕ್ಕೆಜೋಳವನ್ನು ರೂ.2400/- ದರದಂತೆ ಖರೀದಿ ಮಾಡಲಾಗಿದೆ. ಜಿಲ್ಲೆಯಲ್ಲಿ ಕೆ.ಎಂ.ಎಫ್ ಇವರಿಂದ 917 ಜನ ರೈತರಿಂದ 21706 ಕ್ವಿಂಟಾಲ್ ಮೆಕ್ಕೆಜೋಳವನ್ನು ರೂ.2400/- ರಂತೆ ಖರೀದಿಸಿರುತ್ತಾರೆ. ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೋಂದಣಿಯನ್ನು ಫೆಬ್ರವರಿ 13 ರವರೆಗೆ ವಿಸ್ತರಿಸಲಾಗಿದೆ (registration period extension)  ಮತ್ತು ಯು.ಎಂ.ಪಿ. ವೇದಿಕೆ ಅಡಿ ವಹಿವಾಟನ್ನು ಫೆಬ್ರವರಿ 21 ರವರೆಗೆ ವಿಸ್ತರಿಸಲಾಗಿದೆ.

ಐತಿಹಾಸಿಕ ಮೈಲಾರಲಿಂಗೇಶ್ವರ ಕಾರಣಿಕ; ಸಂಪಾದಿತಲೇ ಪರಾಕ್ ಎಂದು ಭವಿಷ್ಯವಾಣಿ ನುಡಿದ ಗೊರವಯ್ಯ

ದಾವಣಗೆರೆ ಶುಗರ್ಸ್ ; ಇಂದಿನಿಂದ ಖರೀದಿ ಆರಂಭ

ಫೆ.5 ರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕುಕ್ಕವಾಡ ಗ್ರಾಮದ (9353444504) ದಾವಣಗೆರೆ ಶುಗರ್ಸ್ ಇವರಿಗೆ ಪ್ರತಿ ಕ್ವಿಂಟಾಲ್ ಗೆ ರೂ.2400/- ರಂತೆ 2000 ಕ್ವಿಂಟಾಲ್ ಗಳಿಗೆ ಸೀಮಿತವಾಗಿ ಖರೀದಿ ನಡೆಯಲಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ದಾವಣಗೆರೆ ವತಿಯಿಂದ ರೈತರ ನೋಂದಣಿ ಪ್ರಾರಂಭಿಸಲಾಗುವುದು.

ನೋಂದಾಯಿತ ರೈತರು ಎಫ್.ಎ.ಕ್ಯೂ ಗುಣಮಟ್ಟದ (ತೇವಾಂಶ ಶೇ. 14 ಇತರೆ ಕಾಳು ಶೇ. 4.5) ಮೆಕ್ಕೆಜೋಳವನ್ನು ಖರೀದಿ ಅಧಿಕಾರಿಗಳು ತಿಳಿಸುವ ದಿನಾಂಕದಂದು ಹದಡಿ ಗ್ರಾಮ ಪಂಚಾಯಿತಿ ಗೋದಾಮಿಗೆ ಮೆಕ್ಕೆಜೋಳವನ್ನು ತರುವುದು.

ಜನವರಿ 31 ರ ಅಂತ್ಯಕ್ಕೆ ರೈತರು ಮಾರಾಟ ಮಾಡಿರುವ ಮೆಕ್ಕೆಜೋಳ ಉತ್ಪನ್ನಕ್ಕೆ ಸರ್ಕಾರ ನಿಗದಿಪಡಿಸಿರುವ ಪ್ರಮಾಣಕ್ಕೆ ವ್ಯತ್ಯಾಸದ ಮೊತ್ತವು ಡಿ.ಬಿ.ಟಿ. ಮೂಲಕ ರೈತರ ಖಾತೆಗೆ ಒಂದು ವಾರದೊಳಗೆ ಜಮೆಯಾಗುತ್ತದೆ. ಈಗಾಗಲೇ ಕೆಲವು ರೈತರು ಪಿ.ಡಿ.ಪಿ.ಎಸ್. ಯೋಜನೆಯಡಿಯಲ್ಲಿ ಬಯೋಮೆಟ್ರಿಕ್ ನೀಡದೇ ನೋಂದಣಿ ಮಾಡಿಸಿದ್ದು ಸದರಿ ರೈತರು ಸಂಬಂಧಿಸಿದ ಎ.ಪಿ.ಎಂ.ಸಿ.ಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *