ದಾವಣಗೆರೆ: ದೇವರಾಜ್ ಅರಸ್ , ಸಿದ್ದರಾಮಯ್ಯ ಕೆಲವೇ ಕೆಲವು ಜಿಲ್ಲೆಗಳ ಕುರುಬರನ್ನು ಎಸ್ ಟಿ ಗೆ ಸೇರಿಸಲು ಶಿಪಾರಸ್ಸು ಮಾಡಿದ್ರು.ಆದರೆ ಈಗ ಕೇಳ್ತಾ ಇರೋದು ಇಡೀ ದೇಶದ ಕುರುಬರಿಗೆ ಎಸ್ ಟಿ ಕೇಳುತ್ತಿದ್ದೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ದಾವಣಗೆರೆ ಆಗಮಿಸಿದ ಎಸ್ ಟಿ ಮೀಸಲಾತಿ ಹೋರಾಟದ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿದರು. ನಗ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಮವೇಶ ನಡೆಯುತ್ತಿದೆ.
ಎಸ್ ಟಿ ಸಿಗೋವರೆಗೂ ಸ್ವಾಮಿಜಿಗಳ ಬೆನ್ನಿಗೆ ನಿಲ್ಲಿ.ಇದುವರೆಗೂ ಎಸ್ ಟಿ ಗೆ ಸೇರಿಸದೆ ಏನ್ ಮಾಡಿದ್ರು ಅಂತ ಕೆಲವರು ಕೇಳ್ತಾರೆ.ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಸಾಕಷ್ಟು ಪಕ್ಷಗಳು ಅಧಿಕಾರದಲ್ಲಿ ಇದ್ದವು.ಅವರು ಹೇಳಬೇಕು ಯಾಕೇ ಎಸ್ ಟಿಗೆ ಸೇರಿಸಿಲ್ಲ ಎಂದು.ಈ ವೇದಿಕೆ ಮೇಲೆ ಕೂತಿರುವವರು ಅಲ್ಲ ಹೇಳೋದು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯರನ್ನು ಎಸ್ ಟಿ ಹೋರಾಟಕ್ಕೆ ಕಾಗಿನೆಲೆ ಸ್ವಾಮೀಜಿಗಳು ಮನೆಗೆ ಹೋಗಿ ಕರೆದರು. ನಾನು ಕೂಡ ಸಿದ್ದರಾಮಯ್ಯ ನವರಿಗೆ ಕರೆಮಾಡಿ ಮಾತನಾಡಿದೆ.ಆದರೂ ಕೂಡ ಅವರು ಬರಲಿಲ್ಲ.ಪಾದಯಾತ್ರೆ ಯಲ್ಲಿ ಲಕ್ಷಾಂತರ ಜನರು ಭಾಗಿಯಾಗುತ್ತಿದ್ದಂತೆ ಮಾತನಾಡಲು ಶುರು ಮಾಡಿದ್ರು.ನನ್ನನ್ನು ಪಾದಯಾತ್ರೆಗೆ ಕರೆದಿಲ್ಲ ಎಂದು ಹೇಳ್ತಾರೆ. ಪಾದಯಾತ್ರೆಗೆ ಬರೋ ಹಾಗೇ ಇದ್ರೆ ಬನ್ನಿ ಆದರೆ ಈ ರೀತಿ ಮಾತನಾಡಬೇಡಿ, ಇಲ್ಲ ಸುಮ್ನೆ ಇರಿ.
ಎಸ್ ಟಿ ಮೀಸಲಾತಿಗೆ ಪಾದಯಾತ್ರೆ ಆರಂಭವಾಗಿದೆ. ಕೈ ಮುಗಿದು ಬೇಡಿಕೊಳ್ಳುತ್ತೇನೆ ಇದರಲ್ಲಿ ರಾಜಕಾರಣ ಮಾಡಬೇಡಿ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಹೇಳಿದರು.



