ದಾವಣಗೆರೆ: ಜಗಳೂರು ತಾಲೂಕಿನ ಶಿಕ್ಷಕರೊಬ್ಬರಿಂದ 10 ಸಾವಿರ ಲಂಚ ಸ್ವೀಕರಿಸುವಾಗ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕ ಆಂಜನೇಯ ನಾಯ್ಕ್ ಎಂಬುವರು ತಮ್ಮನ್ನು ಜಾಲಿನಗರ ಶಾಲೆಗೆ ನಿಯೋಜನೆ ಮಾಡುವಂತೆ ಕೇಳಿಕೊಂಡಿದ್ದರು. ಈ ಕುರಿತು ಶಿಕ್ಷಣ ಸಂಯೋಜಕ ಅವರನ್ನು ಭೇಟಿ ಮಾಡುವಂತೆ ಸೂಚಿಸಿದ್ದರು. ಅವರ ಸೂಚನೆಯಂತೆ ಭೇಟಿ ಮಾಡಿದಾಗ ಬಿಇಒ 25 ಸಾವಿರ ಕೇಳಿದ್ದಾರೆ. ಈ ಹಣ ಕೊಟ್ಟರೆ ನಿಮ್ಮ ಕೆಲಸ ಆಗುತ್ತೆ ಎಂದು ಹೇಳಿದ್ದಾರೆ. ಈ ಬಗ್ಗೆ ಶಿಕ್ಷಕ ಆಂಜನೇಯ ನಾಯ್ಕ್ ಎಸಿಬಿಗೆ ದೂರು ನೀಡಿದ್ದರು. ಹತ್ತು ಸಾವಿರನ್ನು ಬಿಇಒ ಕಚೇರಿಯಲ್ಲಿ ಪಡೆದುಕೊಳ್ಳುವಾಗ ಎಸಿಬಿ ದಾಳಿ ಮಾಅಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



