ಬೆಂಗಳೂರು: ಸಾರಿಗೆ ನೌಕರರು ಪ್ರತಿಭಟನೆ ಕೈಬಿಡದಿದ್ರೆ ಹಂತ ಹಂತವಾಗಿ ಎಸ್ಮಾ ಅಸ್ತ್ರ ಪ್ರಯೋಗ ಮಾಡಲಾಗುತ್ತದೆ ಎಂದು ಬಿಎಂಟಿಸಿ ಎಂಡಿ ಶಿಖಾ ಎಚ್ಚರಿಕೆ ನೀಡಿದ್ದಾರೆ.
ನೌಕರರು ಪ್ರತಿಭಟನೆ ಕೈಬಿಡದೇ ಇದ್ದರೇ ಹಂತ ಹಂತವಾಗಿ ಎಸ್ಮಾ ಜಾರಿ ಮಾಡ
ಡಬೇಕಾಗುತ್ತದೆ. ಸಾರಿಗೆ ಸಚಿವರು ಮಾತುಕತೆಗೆ ಕರೆ ಕೊಟ್ಟಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳನ್ನ ತಕ್ಷಣ ಜಾರಿಗೆ ತರಲು ಸಾಧ್ಯವಿಲ್ಲ. ಕೆಲವೊಂದು ಪ್ರಕ್ರಿಯೆ ಇದೆ, ಅದನ್ನ ಅನುಸರಿಸಬೇಕಾಗುತ್ತದೆ. ನಮ್ಮ ನೌಕರರು ಕೂಡಲೇ ಮುಷ್ಕೆ ಕೈಬಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.



