ದಾವಣಗೆರೆ: ನವದೆಹಲಿಯ ಕರ್ನಾಟಕ ಭವನದಲ್ಲಿ ಗ್ರೂಪ್ ಸಿ ಮತ್ತು ಡಿ ವೃಂದದ ಹುದ್ದೆಗಳನ್ನು(ಉಳಿಕೆ ಮೂಲ ವೃಂದದ – 25 ಮತ್ತು ಹೈದ್ರಾಬಾದ್ ಕರ್ನಾಟಕ ವೃಂದದ -07, ಒಟ್ಟು 32) ಕರ್ನಾಟಕ ಭವನ (ಆತಿಥ್ಯ ಸಂಸ್ಥೆಯಲ್ಲಿನ ಕೆಲವು ಹುದ್ದೆಗಳಿಗೆ – ಕರ್ನಾಟಕ ಭವನ (ವಿಶೇಷ) ನಿಯಮಗಳು, 2020 ರನ್ವಯ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- ಹುದ್ದೆಗಳ ವಿವರ : ಸಹಾಯಕ ವ್ಯವಸ್ಥಾಪಕರು ಗ್ರೂಪ್ ಸಿ ಉಳಿಕೆ ಮೂಲ ವೃಂದ 01 ಹೈದ್ರಾಬಾದ್ ಕರ್ನಾಟಕ ವೃಂದ 01 ಒಟ್ಟು 02 ಹುದ್ದೆಗಳು
- ಸ್ವಾಗತಕಾರರು/ದೂರವಾಣಿ ಪ್ರವರ್ಧಕರು ಗ್ರೂಪ್ ಸಿ ಉಳಿಕೆ ಮೂಲ ವೃಂದ 02 ಹೈದ್ರಾಬಾದ್ ಕರ್ನಾಟಕ 01 ಒಟ್ಟು 03
- ಕಿಚನ್ಮೇಟ್ ಗ್ರೂಪ್ ಡಿ ಉಳಿಕೆ ಮೂಲ ವೃಂದ 07 ಹೈದ್ರಾಬಾದ್ ಕರ್ನಾಟಕ 02 ಒಟ್ಟು 09
- ಪ್ಯೂನ್ ಕಂ ವಾಚ್ಮನ್ ಗ್ರೂಪ್ ಡಿ ಉಳಿಕೆ ವೃಂದ 05 ಹೈದ್ರಾಬಾದ್ ಕರ್ನಾಟಕ ವೃಂದ 01 ಒಟ್ಟು 06
- ಗಾರ್ಡನರ್ ಕಂ ಸ್ವೀಪರ್ ಗ್ರೂಪ್ ಡಿ ಉಳಿಕೆ ಮೂಲ 02 ಒಟ್ಟು 02
- ರೂಂ ಬಾಯ್/ಬೇರರ್ ಗ್ರೂಪ್ ಡಿ ಉಳಿಕೆ ಮೂಲ ವೃಂದ 08 ಹೈದ್ರಾಬಾದ್ ಕರ್ನಾಟಕ ವೃಂದ 02
ಒಟ್ಟು 32 ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನೇಮಕಾತಿ ಮಾರ್ಗಸೂಚಿ/ನಿಬಂಧನೆಗಳನ್ನು (ಅಧಿಸೂಚನೆ) ಓದಿಕೊಂಡು ನಂತರ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು, ಶೈಕ್ಷಣಿಕ ವಿದ್ಯಾರ್ಹತೆ ಕುರಿತು ಅಧಿಸೂಚನೆಯಲ್ಲಿ ವಿವರವಾದ ಮಾಹಿತಿಯನ್ನು ನೀಡಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ನವದೆಹಲಿಯಲ್ಲಿನ ಕರ್ನಾಟಕ ಭವನದಲ್ಲಿಯೇ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ www.karnatakabhavan.karnataka.gov.in ವೆಬ್ಸೈಟ್ನ್ನು ಸಂಪರ್ಕಿಸಬಹುದು. ಈ ವೆಬೆಸೈಟ್ನ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್ 31 ಕಡೆಯ ದಿನಾಂಕವಾಗಿದ್ದು ಏಪ್ರಿಲ್ 7 ಶುಲ್ಕ ಪಾವತಿಸಲು ಕಡೆಯ ದಿನವಾಗಿದೆ ಎಂದು ನಿವಾಸಿ ಆಯುಕ್ತರು ಕರ್ನಾಟಕ ಭವನ, ನವದೆಹಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



