ಮೈಸೂರು : ವೇಗವಾಗಿ ಬಂದಂತ ಕಾರು, ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ, ಬೈಕ್ ನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಬೆಂಗಳೂರು – ಮೈಸೂರು ರಸ್ತೆಯ ದಂಡಿ ಮಾರಮ್ಮನ ಗುಡಿ ಸಮೀಪ ಈ ಘಟನೆ ನಡೆದಿದೆ. ಕಳೆದ ರಾತ್ರಿ ಬೆಂಗಳೂರು – ಮೈಸೂರು ರಸ್ತೆಯ ದಂಡಿಮಾರಮ್ಮ ದೇವಸ್ಥಾನದ ಬಳಿಯಲ್ಲಿ ಬೈಕ್ ನಲ್ಲಿ ಟಿಕೆ ಲೇಔಟ್ ನಿವಾಸಿಗಳಾದ ರಮೇಶ್, ಅವರ ಪತ್ನಿ ಉಷಾ, ಪುತ್ರಿ ಮೋನಿಷಾ ಹಾಗೂ ಪುತ್ರ ಸಿದ್ಧಾರ್ಥ್ ಸೇರಿ ನಾಲ್ವರು ಸಿದ್ದಲಿಂಗಪುರ ಕಡೆಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದಂತ ಕಾರೊಂದು ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ, ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಪುತ್ರ ಸಿದ್ಧಾರ್ಥ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.



