ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಅಖಾಡ ರಂಗೇರಿದೆ. ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪುತ್ರ ಸಮರ್ಥ್ ಮಲ್ಲಿಕಾರ್ಜುನ ಶಾಮನೂರು (Samarth Shamanur) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶಾಮನೂರು ಮನೆತನದ ಮೂರನೇ ತಲೆಮಾರು ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿ ಪಡೆದಂತಾದಿದೆ. ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ (Siddaraiamaih) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumara) ಸಾಥ್ ನೀಡಿದರು. ಸಮರ್ಥ್ ಜೊತೆ ಸಿಎಂ, ಡಿಸಿಎಂ ಹಾಗೂ ಎಸ್ಎಸ್ ಮಲ್ಲಿಕಾರ್ಜುನ್ ಒಟ್ಟಿಗೆ ನಿಂತು ಕೈ ಎತ್ತುವ ಮೂಲಕ ಬಲ ಪ್ರದರ್ಶನ ಮಾಡಿದರು.
ದಾವಣಗೆರೆ: ಬಿಜೆಪಿ ಅಭ್ಯರ್ಥಿಗೆ ವಿನಯ್ಕುಮಾರ್ ಬೆಂಬಲ ಘೋಷಣೆ; ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಅಂತ್ಯಕ್ಕೆ ಪಣ
ಬೃಹತ್ ಮೆರವಣಿಗೆ
ದಾವಣಗೆರೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಮರ್ಥ್ ಶಾಮನೂರು ಆಶೀರ್ವಾದ ಪಡೆದರು. ಈ ವೇಳೆ ತಮ್ಮ ತಾತನವರಾದ ಡಾ.ಶಾಮನೂರು ಶಿವಶಂಕರಪ್ಪಾಜಿಯವರು ಪ್ರತಿನಿತ್ಯ ದುರ್ಗಾಂಭಿಕಾ ದೇವಿಗೆ ಪೂಜೆ ಸಲ್ಲಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ ಕ್ಷಣಗಳನ್ನು ನೆನಪು ಮಾಡಿಕೊಂಡರು.ಈ ಸಂದರ್ಭದಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ ಮಂಜಪ್ಪ ಹಾಗೂ ಯುವ ಮುಖಂಡರುಗಳು ಇದ್ದರು. ನಂತರ ಸಾವಿರಾರು ಕಾರ್ಯಕರ್ತರ ಜೊತೆ ಕಾಂಗ್ ಬೃಹತ್ ಮೆರವಣಿಗೆ ಮೂಲಕ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.
ಬೈ ಎಲೆಕ್ಷನ್ ಗೆದ್ದೇ ಗೆಲ್ಲುತ್ತೇವೆ
ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ನಾಮಪತ್ರ ಸಲ್ಲಿಕೆ ಬಳಿಕ ಮಾತಾಡಿದ ಸಿಎಂ ಸಿದ್ಧರಾಮಯ್ಯ, ಈ ಬಾರಿಯ ದಾವಣಗೆರೆ, ಬಾಗಲಕೊಟೆ ಉಪಚುನಾವಣೆಯಲ್ಲಿ 100% ನಾವು ಗೆಲ್ಲುತ್ತೇವೆ ಎಂದರು.ಶಾಮನೂರು ಶಿವಶಂಕ್ರಪ್ಪ 6 ಬಾರಿ ಎಂಎಲ್ ಎ ಆಗಿದ್ದವರು. ದಾವಣಗೆರೆಯಲ್ಲಿ ಕಾಂಗ್ರೆಸ್ ಬಲವಾಗಿದ್ದು, ಕಾಂಗ್ರೆಸ್, ಜಾತಿ, ಧರ್ಮ ಎನ್ನದೇ ಎಲ್ಲರನ್ನೂ ಒಳಗೊಂಡ ಪಕ್ಷವಾಗಿದೆ ಎಂದು ತಿಳಿಸಿದರು.
ಕಾಂಗ್ರಸ್ ನುಡಿದಂತೆ ನಡೆದ ಪಕ್ಷ, ಸುಳ್ಳು ಭರವಸೆ ಕೊಟ್ಟಿಲ್ಲ. ಕಳೆದ ಚುನಾವಣೆಯಲ್ಲಿ ಕೊಟ್ಟ ಅರ್ಧಕ್ಕೂ ಹೆಚ್ಚು ಭರವಸೆ ಈಡೇರಿಸಿದ್ದೇವೆ. 5 ಗ್ಯಾರಂಟಿ ಯೋಜನೆಯಲ್ಲಿ ದಾವಣಗೆರೆ ನಂಬರ್ 1 ಆಗಿದೆ. ಶಿವಶಂಕ್ರಪ್ಪ ಮಂತ್ರಿಯಾಗಿ MP ಆಗಿ ಅನೇಕ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಪಕ್ಷದ ಶಾಸಕರು ಮೃತರಾದ್ರೆ ಶಾಸಕರ ಮನೆಯವರಿಗೆ ಟಿಕೆಟ್ ಕೊಡುವುದು ಪಕ್ಷದ ಸಂಪ್ರದಾಯ ಅದರಂತೆ ನಡೆದುಕೊಂಡಿದ್ದೇವೆ ಎಂದ್ರು ಸಿಎಂ.
ಕಳೆದ ಬಾರಿ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಶಿಗ್ಗಾಂವನಲ್ಲಿ ಬೊಮ್ಮಾಯಿ ಮಗನ ವಿರುದ್ಧ ಮುಸ್ಲಿಂ ಅಭ್ಯರ್ಥಿ ಪಠಾಣಾ 12 ಸಾವಿರ ಅಂತರದಲ್ಲಿ ಗೆದ್ರು. ಕುಮಾರಸ್ವಾಮಿ ಮಗನ ವಿರುದ್ಧ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಚುನಾವಣೆಯಲ್ಲೂ ದಾವಣಗೆರೆ, ಬಾಗಲಕೊಟೆಯಲ್ಲೂ 100% ನಾವು ಗೆಲ್ಲುತ್ತೇವೆ ಎಂದು ಸಿಎಂ ಭರವಸೆಯ ಮಾತಾಡಿದ್ರು.
ಬಂಡಾಯ ಶಮನ ಮಾಡಿ ಸೂಕ್ತ ಪ್ರಾತಿನಿಧ್ಯ
ದಾವಣಗೆರೆ ಕಾಂಗ್ರೆಸ್ನಲ್ಲಿ ಎದ್ದಿರೋ ಬಂಡಾಯದ ಬಗ್ಗೆ ಮಾತಾಡಿದ ಸಿಎಂ ಸಿದ್ದರಾಮಯ್ಯ ಅವರು, ಅಲ್ಪಸಂಖ್ಯಾತ ನಾಯಕರು ಎಲ್ಲರೂ ಸೇರಿ ಒಮ್ಮತದ ನಿರ್ಧಾರ ಮಾಡಿದ್ದೇವೆ. ಸಾದಿಕ್ ಪೈಲ್ವಾನ್ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತೇವೆ. ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತೇವೆ . ನಾವು ಖಂಡಿತ ಗೆದ್ದೇ ಗೆಲ್ಲುತ್ತೇವೆ, ಬಸವರಾಜ ಬೊಮ್ಮಾಯಿ ಮಗ, ಕುಮಾರಸ್ವಾಮಿ ಮಗ ಅವರನ್ನೇ ಸೋಲಿಸಿಲ್ವಾ? ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರರ. ದಾವಣಗೆರೆ, ಬಾಗಲಕೊಟೆಯಲ್ಲೂ 100% ನಾವು ಗೆಲ್ಲುತ್ತೇವೆ ಎಂದು ಸಿಎಂ ಭರವಸೆಯ ಮಾತಾಡಿದರು.
ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು…?
ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಎಲ್ಲಾ ಶಾಸಕರು ಸಮರ್ಥ್ ಅವರಿಗೆ ಅವಕಾಶ ಕೊಡಬೇಕು. ಮುಸ್ಲಿಂ ಸಮುದಾಯದ ಶಾಸಕರು ಕೂಡ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ರು. ಬೆಂಗಳೂರಿಗಿಂತ ದಾವಣಗೆರೆ ಅಭಿವೃದ್ಧಿ ಆಗಿದೆ. ಶಿವಶಂಕ್ರಪ್ಪ ಅವರ ಕೊಡುಗೆಯಾಗಿ ದಾವಣಗೆರೆ ಮೆಡಿಕಲ್ ಹಬ್ ಆಗಿದೆ. ದಾವಣಗೆರೆಗೆ ಹೊಸ ರೂಪ ಕೊಟ್ಟಿದ್ದು ಶಾಮನೂರು ಕುಟುಂಬ ಎಂದು ಡಿಕೆಶಿ ಹೇಳಿದ್ರು.
ಎಲ್ಲರಿಗೂ ಗ್ಯಾರಂಟಿಗಳು ತಲುಪುತ್ತಿದ್ದು, ನಮ್ಮ ಸಮರ್ಥ್ ಅವರು ಬಹುಮತದಿಂದ ಗೆಲ್ತಾರೆ. ರಾಜಕಾರಣದಲ್ಲಿ ಎಲ್ಲರಿಗೂ ಕೇಳುವ ಹಕ್ಕಿದೆ. ಇದೀಗ ಈ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡ್ತೇವೆ ಎಂದರು.



