Connect with us

Dvgsuddi Kannada | online news portal | Kannada news online

ಇವತ್ತು ಸಂಜೆಗೇ ಮಂತ್ರಿ ಆಗಬಹುದು ಹೇಳಕ್ಕಾಗಲ್ಲ;  ಎಂಎಲ್ ಸಿ ಶಂಕರ್

ಪ್ರಮುಖ ಸುದ್ದಿ

ಇವತ್ತು ಸಂಜೆಗೇ ಮಂತ್ರಿ ಆಗಬಹುದು ಹೇಳಕ್ಕಾಗಲ್ಲ;  ಎಂಎಲ್ ಸಿ ಶಂಕರ್

ಬೆಂಗಳೂರುನಾನು ಮಂತ್ರಿ ಆಗುವ ಭರವಸೆ ಇದ್ದು, ಇವತ್ತು ಸಂಜೆಗೇ ಮಂತ್ರಿ ಆಗಬಹುದು ಹೇಳಕ್ಕಾಗಲ್ಲ ಎಂದು ಎಂಎಲ್​ಸಿ ಆರ್.​ ಶಂಕರ್​ ಹೇಳಿದ್ದಾರೆ.

ಸಿಎಂ ನಿವಾಸದ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗಷ್ಟೇ ಸಿಎಂ ಬಳಿ ಮಾತಾಡಿ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ನೀನು ಸಚಿವ ಆಗ್ತೀಯಾ ಎಂದು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ತಡ ಆಗಿದೆ. ಈಗ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ ಎಂದರು.

ಇನ್ನು ನಾನು ಎಂದಿನಂತೆ ಸಿಎಂ ಭೇಟಿಗೆ ಹೋದೆ. ಅವರೇ ಹೇಳಿದರು, ನೀನು ಇನ್ನೆರಡು ಮೂರು ದಿನದಲ್ಲಿ ಮಂತ್ರಿ ಆಗ್ತೀಯಾ ಅಂತಾ. ನಾನು, ಉಮೇಶ್ ಕತ್ತಿ ಸಿಎಂ ಜೊತೆ ತಿಂಡಿ ಮಾಡಿದ್ವಿ. ಉಮೇಶ್ ಕತ್ತಿಗೂ ಇದನ್ನೇ ಹೇಳಿದರು. ಕತ್ತಿಯವರು ಸಹ ಅಹವಾಲು ಇಟ್ಟರು. ಇನ್ನು ಎರಡು ದಿನದಲ್ಲಿ ಮಂತ್ರಿ ಆಗ್ತಿರಾ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಿದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top