ಹೈದರಾಬಾದ್: ಆಂಧ್ರ ಪ್ರದೇಶದಾದ್ಯಂತ108 ಬೈಕ್ಗಳನ್ನು ಕಳ್ಳತನ ಮಾಡಿದ್ದ ಖತರ್ನಾಕ್ ಆರು ಮಂದಿ ಕಳ್ಳರನ್ನು ಪೂರ್ವ ಗೋದಾವರಿ ಪೊಲೀಸರು ಬಂಧಿಸಿದ್ದಾರೆ.
ಮುಖ್ಯ ಆರೋಪಿಗಳನ್ನು ಕವಾಡಿ ನಾನಿ (25) ಮತ್ತು ಬಂಡಿ ಶಿವ (22) ಎಂದು ಗುರುತಿಸಲಾಗಿದೆ. ಇವರು ಬೈಕ್ಗಳನ್ನು ಕದ್ದು ಕಾಥೆಟಿ ಚಿನ್ನ, ದುರ್ಗ ಪ್ರಸಾಸ್, ಚಿಂತಾಲ ಲವ ರಾಜು ಮತ್ತು ಗುತ್ತಲ ಶ್ರೀನು ಎಂಬವರಿಗೆ ಮಾರಾಟ ಮಾಡುತ್ತಿದ್ದರು. ಇವರು ಕದ್ದ ಬೈಕ್ಗಳನ್ನು ಕೊಂಡು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
East Godavari District Police arrested gang of Two Wheeler Offenders,recovered 108 Motor Bikes w/Rs. 43,00,000/-.
It is the highest recovery in the recent past in the State.
Superintendent of Police appreciated the Police Team & awarded appreciation certificates.@APPOLICE100 pic.twitter.com/hmUbdq46hD
— Kakinada District Police (@KAKINADAPOLICE) October 8, 2020
ಇದುವರೆಗೆ ಕದ್ದ 108 ಬೈಕ್ಗಳನ್ನು ಜಿಲ್ಲಾ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಈ ಬೈಕ್ಗಳ ಮೌಲ್ಯ ಸುಮಾರು 43 ಲಕ್ಷ ರೂಪಾಯಿ. ಸುಮಾರು 108 ಬೈಕ್ಗಳನ್ನು ಆಂಧ್ರ ಪ್ರದೇಶದ 9 ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯಿಂದ 34, ಪಶ್ಚಿಮ ಗೋದಾವರಿ 22, ವಿಶಾಖಪಟ್ಟಣಂ 43, ವಿಜಯವಾಡ 7 ಮತ್ತು ವಿಜಯನಗರಂದಿಂದ ಎರಡು ಬೈಕ್ಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



