ದಾವಣಗೆರೆ: ಅಟಲ್ ಭೂ ಜಲ ಯೋಜನೆ , ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ನೀರಿನ ಕಡಿಮೆ ಬಳಕೆಗೆ ಅನುಕೂಲವಾಗುವಂತೆ ತುಂತುರು ಮತ್ತು ಸೂಕ್ಷ್ಮ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ಮೂಲಕ ಅತಿ ಸಣ್ಣ ಎಸ್ಸಿ, ಎಸ್ಟಿ ರೈತರಿಗೆ ಯೋಜನೆಗೆ ತಗುಲಿದ ವೆಚ್ಚದ ಶೇಕಡ 90ರಷ್ಟು ಮತ್ತು ಇತರೆ ಎಲ್ಲಾ ವರ್ಗದ ರೈತರಿಗೆ ಶೇಕಡ 45ರಷ್ಟು ಸಹಾಯಧನ ಸಿಗಲಿದೆ. ಸಹಾಯಧನ ಪಡೆಯಲು ರೈತರು ಕಡ್ಡಾಯವಾಗಿ ಈ ದಾಖಲೆ ಸಲ್ಲಿಸುವುದು ಅಗತ್ಯವಾಗಿದೆ.
ಚಿಕ್ಕಬಳ್ಳಾಪುರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ, ಚಾಮರಾಜನಗರ, ದಾವಣಗೆರೆ, ಗದಗ, ಹಾಸನ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಸೂಕ್ಷ್ಮ , ತುಂತುರು ಮತ್ತು ಹನಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಿದೆ. ಈ ಯೋಜನೆ ಲಾಭ ಪಡೆಯಲು ಮತ್ತು ಹೆಚ್ಚಿನ ಮಾಹಿತಿಗೆ ರೈತರು ಆಯಾ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕಿದೆ. ಈ ಮೂಲಕ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಬಿಹಾರಿ ಯೋಜನೆ ಅಡಿ ತುಂತುರು ಮತ್ತು ಹನಿ ನೀರಾವರಿ ಕೃಷಿ ಘಟಕಗಳನ್ನು ಕೃಷಿ ಬೆಳೆಗಳಿಗೆ ನೀಡಲು ಆದೇಶಿಸಲಾಗಿದೆ. ಎಲ್ಲಾ ವರ್ಗದ ರೈತರಿಗೆ ಎರಡು ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಣ್ಣ, ಅತಿ ಸಣ್ಣ ರೈತರಿಗೆ ಶೇಕಡ 90ರಷ್ಟು ಇತರೆ ವರ್ಗದ ರೈತು ಶೇಕಡ 45ರಷ್ಟು ಸಹಾಯಧನ ನೀಡಲಾಗುವುದು.
- ಸಹಾಯಧನ ಪಡೆಯಲು ಬೇಕಾದ ದಾಖಲೆಗಳು
- ಅರ್ಜಿ ನಮೂನೆ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- 2 ಫೋಟೋ
- ಜಾತಿ ಪ್ರಮಾಣ ಪತ್ರ ( ಪ.ಜಾ/ ಪ ಪಂ ದವರಿಗೆ ಮಾತ್ರ)
- ಪಹಣಿ
- ಕೊಳವೆ ಬಾವಿ ಪ್ರಮಾಣ ಪತ್ರ
- ವಿದ್ಯುತ್ ಪರವಾನಗಿ
- ಬೆಳೆ ದೃಡಿಕರಣ ಪತ್ರ (ಖುಷ್ಕ ಜಮೀನು ಮಾತ್ರ)
- 20 ರೂ. ಛಾಪ ಕಾಗದಲ್ಲಿ ಚೆಕ್ ಬಂದಿಯನ್ನು ನೋಟರಿ ಮಾಡಿಸಬೇಕು



