Connect with us

Dvgsuddi Kannada | online news portal | Kannada news online

ಲಿಂಗಾಯತ, ಒಕ್ಕಲಿಗರು ಭಿಕ್ಷುಕರಲ್ಲ; ಅಲ್ಪಸಂಖ್ಯಾತರಿಗೆ ಮೀಸಲಾತಿ ತೆಗೆದಿದ್ಯಾಕೆ..? ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಮೀಸಲಾತಿ ರದ್ದು: ಡಿಕೆಶಿ

ಪ್ರಮುಖ ಸುದ್ದಿ

ಲಿಂಗಾಯತ, ಒಕ್ಕಲಿಗರು ಭಿಕ್ಷುಕರಲ್ಲ; ಅಲ್ಪಸಂಖ್ಯಾತರಿಗೆ ಮೀಸಲಾತಿ ತೆಗೆದಿದ್ಯಾಕೆ..? ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಮೀಸಲಾತಿ ರದ್ದು: ಡಿಕೆಶಿ

ಬೆಂಗಳೂರು: ಲಿಂಗಾಯತರು, ಒಕ್ಕಲಿಗರು ಯಾರು ಭಿಕ್ಷುಕರಲ್ಲ . ಅಲ್ಪಸಂಖ್ಯಾತರಿಗೆ ಮೀಸಲಾತಿ ತೆಗೆದಿದ್ಯಾಕೆ..?  30-40 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಈ  ಎಲ್ಲಾ ಮೀಸಲಕಾತಿ ರದ್ದು ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ನೀಡಬೇಕು. ಆದರೆ ಬಿಜೆಪಿ ಸರ್ಕಾರ ವೈಯಕ್ತಿಕ ನಿರ್ಧಾರ ತೆಗೆದುಕೊಂಡಿದೆ.  30-40 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ  ಈ ಮೀಸಲಾತಿ ರದ್ದು ಮಾಡುತ್ತೇವೆ ಎಂದರು.

ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವರು ಇಂದು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಜನಾಂಗವನ್ನು ರಕ್ಷಿಸಬೇಕಾದವರು ಮೋಸ ಮಾಡಲು ಹೊರಟಿದ್ದಾರೆ. ಬಿಜೆಪಿ ನಡತೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯ, ಕೇಂದ್ರ ಸರ್ಕಾರಗಳು ಸೇಡಿನ ರಾಜಕಾರಣ ಮಾಡುತ್ತಿದ್ದು, 90 ದಿನದಲ್ಲಿ ಮೂರು ಬಾರಿ ಮೀಸಲಾತಿ ಬದಲಿಸಲು ಹೊರಟಿದ್ದಾರೆ. ಯಾವುದೇ ಆಯೋಗ ವರದಿ ಕೊಟ್ಟಿಲ್ಲ. ಇವರೇ ಕುಳಿತುಕೊಂಡು ಚೀಟಿಯಲ್ಲಿ ಬರೆದು ಮೀಸಲಾತಿ ಬದಲಾಯಿಸಲು ಹೊರಟಿದ್ದಾರೆ. ಇಲ್ಲಿ ಯಾರೂ ಭಿಕ್ಷುಕರಲ್ಲ. ಎಸ್‍ಸಿ, ಎಸ್‍ಟಿ, ಮುಸ್ಲಿಮರು, ಹಿಂದುಳಿದ ವರ್ಗದವರು ಮನುಷ್ಯರಲ್ಲವೇ? ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ ಶೇ.4 ರಷ್ಟು ಮೀಸಲಾತಿಯನ್ನು ತೆಗೆದಿದ್ಯಾಕೆ ಎಂದು ಕಿಡಿಕಾರಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top