ದಾವಣಗೆರೆ: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕೆ..? ಅಧಿಕಾರಿಗಳ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಕಿಡಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಜನರ ಆರೋಗ್ಯ ಕಾಪಾಡುವ ಆಸ್ಪತ್ರೆ ಮುಖ್ಯವೋ ಇಲ್ಲ ಆಂಬುಲೆನ್ಸ್ ಶೆಡ್ ಮುಖ್ಯವೋ? ಇದೊಂದು ರೀತಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿಯುವ ಪ್ರಯತ್ನ, ಯಾವುದೇ ಕಾರಣಕ್ಕೂ ಆಸ್ಪತ್ರೆ ದುರಸ್ಥಿ ನಿಲ್ಲಬಾರದು, ಆಂಬುಲೆನ್ಸ್ ಖರೀದಿಸಲು ಹಣವಿದೆ, ಶೆಡ್‍ಗೆ ಹಣವಿಲ್ಲವೇ, ಮೊದಲ ಆದ್ಯತೆ ಆಸ್ಪತ್ರೆ ರಿಪೇರಿಗೆ ಕೊಡಿ ಜನರ ಆರೋಗ್ಯ ಕಾಪಾಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಕಿಡಿಕಾರಿದರು.

ದಾವಣಗೆರೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲಾ ಆರೋಗ್ಯಾಧಿಕಾರಿ ಆರೋಗ್ಯ ಕೇಂದ್ರವೊಂದರ ಮೇಲ್ಚಾವಣಿ ಸೋರುತ್ತಿದ್ದ ಕಾಮಗಾರಿಯನ್ನು ಬದಲಾಯಿಸಿ, ಆಂಬುಲೆನ್ಸ್ ಶೆಡ್ ನಿರ್ಮಿಸುವ ಕಾಮಗಾರಿಗೆ ಬದಲಾಯಿಸಿಕೊಳ್ಳಲಾಗಿದೆ ಎಂದಾಗ, ಉಸ್ತುವಾರಿ ಕಾರ್ಯದರ್ಶಿಗಳು ಈ ರೀತಿ ಕಿಡಿಕಾರಿದರು.

ಜನರ ಆರೋಗ್ಯ ಕಾಪಾಡುವ ಆಸ್ಪತ್ರೆ ಮುಖ್ಯವೋ ಇಲ್ಲ ಆಂಬುಲೆನ್ಸ್ ಶೆಡ್ ಮುಖ್ಯವೋ? ಇದೊಂದು ರೀತಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿಯುವ ಪ್ರಯತ್ನ, ಯಾವುದೇ ಕಾರಣಕ್ಕೂ ಆಸ್ಪತ್ರೆ ದುರಸ್ಥಿ ನಿಲ್ಲಬಾರದು, ಆಂಬುಲೆನ್ಸ್ ಖರೀದಿಸಲು ಹಣವಿದೆ, ಶೆಡ್‍ಗೆ ಹಣವಿಲ್ಲವೇ, ಮೊದಲ ಆದ್ಯತೆ ಆಸ್ಪತ್ರೆ ರಿಪೇರಿಗೆ ಕೊಡಿ ಜನರ ಆರೋಗ್ಯ ಕಾಪಾಡಿ ಎಂದರು.

ಪಿ.ಆರ್.ಇ.ಡಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ರಸ್ತೆ ಬದಿಗಳನ್ನು ರೈತರು ಒತ್ತುವರಿ ಮಾಡಿಕೊಂಡು ಬೇಲಿಗಳನ್ನು ಹಾಕಿಕೊಂಡಿದ್ದಾರೆ ಹಾಗಾಗಿ ರಸ್ತೆ ಬದಿಗಳನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ, ಇತ್ತೀಚಿಗೆ ಸುರಿಯುತ್ತಿರುವ ಅಪಾರ ಮಳೆಯಿಂದಾಗಿ ಉಳಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿಲ್ಲ ಎಂದಾಗ, ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿಕ್ರಿಯಿಸಿ, ರಸ್ತೆ ರಿಪೇರಿ ಮಾಡ್ರಿ ಎಂದರೆ ಮಳೆ ಎಂಬ ಸಬೂಬು ಹೇಳ್ತಿರಲ್ರೀ ನಿಮ್ಮನ್ನ ಕರಾವಳಿ ಅಂತಹ ಪ್ರದೇಶಗಳಿಗೆ ಹಾಕಬೇಕು ಆಗ ಗೊತ್ತಾಗುತ್ತದೆ ಮಳೆಯಲ್ಲಿ ಹೇಗೆ ಕೆಲಸ ಮಾಡ್ಬೇಕು ಅಂತ, ಮೊದಲು ರಸ್ತೆಗಳನ್ನ ಅಳತೆ ಮಾಡಿಸಿ, ಇಲ್ಲಾಂದ್ರೆ ರಸ್ತೆಗಳು ಇರೋದಿಲ್ಲ, ರಸ್ತೆ ಮಾಡೋ ನೆಪದಲ್ಲಿ ರಸ್ಥೆಗಳನ್ನು ಬಿಡಿಸಿಕೊಳ್ಳಿ ಎಂದರು.

ಶಿಕ್ಷಣ ಇಲಾಖೆಯಲ್ಲಿ ಬಿಸಿಯೂಟ ಕಾರ್ಯಕ್ರಮ ಸರಿಯಾಗಿ ನಡೆಯುತ್ತಿದೆಯೇ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಸರಿಯಾಗಿ ಆಗುತ್ತಿದೆಯೇ ಹಾಗೂ ಮೊಟ್ಟೆ ತನ್ನುವ ಮಕ್ಕಳ ಪ್ರಮಾಣ ಎಷ್ಟು ಎಂದಾಗ, ಅಕ್ಷರ ದಾಸೋಹ ಅಧಿಕಾರಿ ಶೇ.90 ರಷ್ಟು ಮಕ್ಕಳು ಮೊಟ್ಟೆ ತನ್ನುತ್ತಾರೆ ಎಂದರು. ಉಸ್ತುವಾರಿ ಕಾರ್ಯದರ್ಶಿಗಳು ದಾವಣಗೆರೆಯಂತಹ ಜಿಲ್ಲೆಯಲ್ಲಿ ಅಷ್ಟೊಂದು ಪ್ರಮಾಣದ ಮಕ್ಕಳು ಮೊಟ್ಟೆ ತನ್ನಲಿಕ್ಕಿಲ್ಲ ಸರಿಯಾಗಿ ಚೆಕ್ ಮಾಡಿ ಎಂದರು.

ಆಯುಷ್ ಅಧಿಕಾರಿ ಶಂಕರೇಗೌಢ ಮಾಹಿತಿ ನೀಡಿ, ದಾವಣಗೆರೆ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಶೌಚಾಲಯ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿ ಬನ್ನಿಕೋಡು, ಮೂಗಿನಗಂದಿ, ಹಿರೇಗೋಣಿಗೆರೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಮೇಲೆ ಯೋಗ ಹಾಲ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಜವಳಿ ಕೈಮಗ್ಗ ಇಲಾಖೆ ಅಧಿಕಾರಿ ಈ ಬಾರಿಯ ದಸರಾ ಸ್ತಬ್ದ ಚಿತ್ರಕ್ಕೆ 21 ಲಕ್ಷ ನಿಗದಿಯಾಗಿದ್ದು ಜಿಲ್ಲೆಯ ಮೂರು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಅದರಲ್ಲಿ ಚನ್ನಗಿರಿಯ ಪುಷ್ಕರಣಿಯೂ ಒಂದು ಎಂದರು. ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿಕ್ರಿಯಿಸಿ, ಪುಷ್ಕರಣಿ ಸ್ತಬ್ದ ಚಿತ್ರ ಒಳ್ಳೆಯ ಆಯ್ಕೆ ಎಂದರು.

ನಿಗದಿಪಡಿಸಿಕೊಂಡಿರುವ ಕಾಮಗಾರಿಗಳನ್ನು ಬೇಗ ಬೇಗ ಮುಗಿಸಿ, ಜಿಪಂ ಚುನಾವಣೆ ಯಾವಾಗ ಎಂದು ಗೊತ್ತಾಗುತ್ತಿಲ್ಲ, ಅನುದಾನ ಕೊನೇ ಕಂತಿನಲ್ಲಿ ಕಡಿತವಾಗಬಹುದು ಅಲ್ಲಿವರೆಗೂ ಕಾಯದೆ ಬೇಗ ಕೆಲಸಗಳನ್ನು ಮುಗಿಸಿ ಎಂದರು.
ಪೋಷಣ್ ಅಭಿಯಾನದ ಅಂಗವಾಗಿ ಅಂಗನವಾಡಿ ಶಾಲಾ ಪೂರ್ವ ಶಿಕ್ಷಣದ ಪ್ರಗತಿ ಪಥ ಹಾಗೂ ಪಶು ಸಂಗೋಪನಾ ಇಲಾಖೆಯ ರೇಬಿಸ್ ರೋಗ ತಡೆಗಟ್ಟೋಣ ಬನ್ನಿ, ರೇಬಿಸ್ ಲಸಿಕಾ ಕಾರ್ಡ್ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಜಿ.ಪಂ. ಸಿಇಒ ಡಾ.ಚೆನ್ನಪ್ಪ, ಮುಖ್ಯ ಲೆಕ್ಕಾಧಿಕಾರಿ ಸೌಮ್ಯಶ್ರೀ,ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *