ದಾವಣಗೆರೆ ‘ಯಜಮಾನ್’ ಇನ್ನಿಲ್ಲ; ಯಜಮಾನ್ ಮೋತಿ ವೀರಣ್ಣ ನಿಧನಕ್ಕೆ ಕಂಬನಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

 

ದಾವಣಗೆರೆ: ನಗರದ ಯಜಮಾನ್ ಮನೆತನದ ಹಿರಿಯರು, ಸಮಾಜ ಸೇವಕ, ಉದ್ಯಮಿ, ಮಾಜಿ ಶಾಸಕ, ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಯಜಮಾನ್ ಮೋತಿ ವೀರಣ್ಣ ಶುಕ್ರವಾರ ತಡರಾತ್ರಿ 12 ಸುಮಾರಿಗೆ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

90 ವರ್ಷ ವಯಸ್ಸಿನ ವೀರಣ್ಣ, ವಯೋಸಹ ಸಮಸ್ಯೆಯಿಂದ ಬಳಲುತ್ತಿದ್ದರು. ರಾಜಕೀಯ, ಸಿನಿಮಾ, ಸಮಾಜ‌ ಸೇವೆ‌ , ಉದ್ಯಮ ಹೀಗೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ‌ತೋಡಗಿಸಿಕೊಂಡಿದ್ದರು. ದಾವಣಗೆರೆ‌ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾದ ಯಜಮಾನ್ ಮನೆತನ ಕೂಡ ಒಂದು. ದಾವಣಗೆರೆ ಹೃದಯ ಭಾಗದಲ್ಲಿದ್ದ ಅತ್ಯಂತ ಹಳೆಯ ಮೋತಿ ಚಲನಚಿತ್ರ ಮಂದಿರ ಸಹ ಇವರ ಮನೆತನಕ್ಕೆ ಸೇರಿದ್ದಾಗಿದೆ.

ದಾವಣಗೆರೆ: ರೈಲ್ವೆ ಸ್ಟೇಷನ್- ಪಾಲಿಕೆ ನಡುವೆ ಪಾದಚಾರಿ ಮೇಲ್ಸೇತುವೆ; ಧೂಡಾದಿಂದ ಹೊಸ ಬಡಾವಣೆ ಅಭಿವೃದ್ಧಿ

ಅಪಾರ ಬಂಧು ಬಳಗ ಆಗಲಿದ ನಾಯಕ

ಚಿತ್ರ ನಿರ್ಮಾಪಕ ಯಜಮಾನ್ ಮೋತಿ ರಾಜೇಂದ್ರ ಸೇರಿದಂತೆ, ಇಬ್ಬರು ಪುತ್ರರು, ಓರ್ವ ಪುತ್ರಿ, ನಾಲ್ವರು ಮೊಮ್ಮಕ್ಕಳು, ಓರ್ವ ಮರಿಮೊಮ್ಮಗಳು ಮತ್ತು ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಎಂ.ಸಿ.ಸಿ. `ಬಿ’ ಬ್ಲಾಕ್ ಮಾತೆ ಗೌರಿ ನಿವಾಸ’ ದಲ್ಲಿಡಲಾಗಿದ್ದು, ಇಂದು (ಶನಿವಾರ) ಸಂಜೆ 4 ಗಂಟೆಗೆ ಸ ಹದಡಿ ರಸ್ತೆಯಲ್ಲಿರುವ ಶ್ರೀ ಯಜಮಾನ್ ಮೋತಿ ದೊಡ್ಡಪ್ಪ ಟ್ರಸ್ಟ್ ನಿವೇಶನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

ಯಜಮಾನ ಮನೆತನ ಗೌರವ ಬಂದಿದ್ದೇಗೆ..?

ಯಜಮಾನ್ ಮೋತಿ ವೀರಣ್ಣ ಅವರು ಜಮೀನ್ದಾರರಾಗಿದ್ದ ಮೋತಿ ದೊಡ್ಡಪ್ಪ ಅವರ 5ನೇ ಪುತ್ರರಾಗಿದ್ದರು. ದೊಡ್ಡಪ್ಪ ಅವರ ನಡೆ – ನುಡಿ – ಶಿಸ್ತು – ಯಜಮಾನಿಕೆಯಿಂದಾಗಿ ಅವರಿಗೆ ಯಜಮಾನ್ ಎಂ ಬ ಅಡ್ಡ ಹೆಸರು ಬಂದಿತ್ತು. ಈ ಹಿನ್ನೆಲೆಯಲ್ಲಿಯೇ ಯಜಮಾನ್ ಎಂಬ ಸರ್ ನೇಮ್ ಅವರ ಮನೆತನದಲ್ಲಿ ಮುಂದುವರೆದು ಬಂದಿದೆ.

ದಾವಣಗೆರೆ: ಇಂಜಿನಿಯರಿಂಗ್ ಮುಗಿಸಿದ ಯುವತಿ ಲೌಕಿಕ ಜೀವನ ತ್ಯಜಿಸಿ ಆಧ್ಯಾತ್ಮದ ಕಡೆ ಒಲವು; ಸಂನ್ಯಾಸತ್ವ ಸ್ವೀಕಾರ

ರಾಜಕಾರಣಿಗಳಿಗೆ ಆದರ್ಶರು

ವಿದ್ಯಾರ್ಥಿ ದಿಸೆಯಿಂದಲೇ ಸಂಘಟನೆಗಳಲ್ಲಿ ಚತುರ ರಾಗುದ್ದ ಯಜಮಾನ್ ಮೋತಿ ವೀರಣ್ಣ,‌ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡರು. ನಂತರದ ದಿನಗಳಲ್ಲಿ ಕಾಂಗ್ರೆಸ್ ನಿಂದ ದಾವಣಗೆರೆ ನಗರಸಭೆ ಸದಸ್ಯರಾಗಿ, ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಜ್ಜನ ರಾಜಕಾರಣಿಯಾಗಿದ್ದರು.

ಕಮ್ಯುನಿಸ್ಟ್ ಆಡಳಿತ‌ ಕೊನೆಗಾಣಿಸಿದರು

1985ರಲ್ಲಿ ಅಂದಿನ ದಾವಣಗೆರೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಕಾಂ. ಪಂಪಾಪತಿ ಅವರ ವಿರುದ್ಧ ಮೋತಿ ವೀರಣ್ಣ ಪರಾಭವಗೊಂಡಿದ್ದರು. 1989 ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು, 29 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯ ಗಳಿಸುವುದರ ಮೂಲಕ ಶಾಸಕರಾಗಿ ಆಯ್ಕೆಯಾಗುವುದರೊಂದಿಗೆ ಮೂರು ದಶಕಗಳ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಕಾಂ. ಪಂಪಾಪತಿ ಶಾಸಕತ್ವದ ಆಡಳಿತ ಕೊನೆಗಾಣಿಸಿದರು.

ಸಾಮಾಜಿಕ ಸೇವಾ ಕಾರ್ಯಕರ್ತರಾಗಿದ್ದ ಮೋತಿ ವೀರಣ್ಣ, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಳೇಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನ, ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇರಿದಂತೆ, ಹಲವು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯ ಪದಾಧಿಕಾರಿಗಳಾಗಿದ್ದರು. ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಅವರು, ಶ್ರೀ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಉಪಾಧ್ಯಕ್ಷ ಆಗಿ ಸೇವೆ ಸಲ್ಲಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *