ದಾವಣಗೆರೆ: ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನಕ್ಕೆ ನಗರದ ಶ್ರೀ ರೇಣುಕಾಮಂದಿರದಲ್ಲಿ ಚಾಲನೆ ಸಿಕ್ಕಿದೆ. ರೇಣುಕಾಮಂದಿರದಿಂದ ಪ್ರಮುಖ ಬೀದಿಗಳಲ್ಲಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮೆರವಣಿಗೆ ಮಾಡುವ ಮೂಲಕ ಮಹಾ ಅಧಿವೇಶಕ್ಕೆ ಚಾಲನೆ ನೀಡಲಾಯಿತು.
ಡೊಳ್ಳು, ನಂದಿ ಕುಣಿತ, ವೀರಗಾಸೆ, ಕಂಸಾಳೆ, ಹುಲಿ ಕುಣಿತ ಸೇರಿ ವಿವಿಧ ಜಾನಪದ ಕಲಾ ತಂಡಗಳು ಮತ್ತು ಮಂಗಳವಾದ್ಯಗಳೊಂದಿಗೆ ನಗರದ ಎಂಬಿಎ ಕಾಲೇಜ್ ಮೈದಾನದ ವರೆಗೆ ಮೆರವಣಿಗೆ ನಡೆಯಿತು. ಇಂದಿನಿಂದ ಎರಡು ದಿನ ಮಹಾ ಅಧಿವೇಶ ನಡೆಯಲಿದೆ. ಎರಡು ದಿನದ ಅಧಿವೇಶನದಲ್ಲಿ ಸಮಾಜಕ್ಕೆ ಅಗತ್ಯವಾದ ಕೆಲವು ನಿರ್ಣಯ ತೆಗೆದುಕೊಳ್ಳಲಾಗುವುದು.
ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಅಧಿವೇಶನಕ್ಕೆ ಆಗಮಿಸಿದ್ದಾರೆ. ಭಾಗವಹಿಸಿದ ಎಲ್ಲರಿಗೂ ವಸತಿ, ಊಟ ಹಾಗೂ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಎರಡು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪ ವೇದಿಕೆ ಇನ್ನೂಂದು ಜೆ ಹೆಚ್ ಪಟೇಲ್ ವೇದಿಕೆ ಮಾಡಲಾಗಿದೆ. ಕೃಷಿ ಮತ್ತು ಕೈಗಾರಿಕೆ ಅಧಿವೇಶನ, ಶೈಕ್ಷಣಿಕ ಅಧಿವೇಶನ, ಧಾರ್ಮಿಕ ಅಧಿವೇಶನ, ಮಹಿಳಾ ಮತ್ತ ಯುವ ಅಧಿವೇಶನ, ನೌಕರರು, ಸಾಹಿತಿಗಳ ಅಧಿವೇಶ ಕಾರ್ಯಕ್ರಮ ಜರಗುತ್ತದೆ. ಒಂದೂವರೆ ಲಕ್ಷ ಜನರಿಗೆ ಊಟ ವ್ಯವಸ್ಥೆ ಮಾಡಲಾಗಿದೆ. ರಾಜ್ಯಸ ವಿವಿಧ ಮಠದ ವೀರಶೈವ ಲಿಂಗಾಯತ ಹರಚರ ಮೂರ್ತಿ ಸ್ವಾಮೀಜಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲಿದ್ದಾರೆ.
ಇನ್ನು ವೀರಶೈವ ಮಹಾ ಅಧಿವೇಶದಲ್ಲಿ ಬೆಣ್ಣೆ ದೋಸೆ ಉತ್ಸವ ಗಮನ ಸೆಳೆದಿದೆ. ಈ ದೋಸೆ ಉತ್ಸವ ಇಂದು, ನಾಳೆ, ನಾಡಿದ್ದು ಮೂರು ದಿನಗಳ ಕಾಲ ನಡೆಯಲಿದೆ.ದಾವಣಗೆರೆ ಎಂಬಿ ಕಾಲೇಜ್ ಹಾಗೂ ಗಾಜಿನ ಮನೆ ಆವರಣದಲ್ಲಿ ಬೆಣ್ಣೆ ದೋಸೆ ಉತ್ಸವ ನಡೆಯಲಿದೆ.



