ನಟ ಸುದೀಪ್ ನೋಡಲು ನೂಕುನುಗ್ಗಲು; ಕುರ್ಚಿ, ಟೇಬಲ್ ಪೀಸ್ ಪೀಸ್..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ನಟ ಸುದೀಪ್ ಇಂದು ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ  ಭಾಗಿಯಾಗಿದ್ರು. ಸುದೀಪ್  ನೋಡಲು ಅಪಾರ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಗಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ನಟ ಸುದೀಪ್  ವೇದಿಕೆ  ಏರುತ್ತಿದ್ದಂತೆ  ಅಭಿಮಾನಿಗಳೂ ಕೂಡ  ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಪೊಲೀಸರು ನಿಯಂತ್ರಿಸಲು ಎಷ್ಟೇ ಪ್ರಯತ್ನಪಟ್ಟರು. ಅಭಿಮಾನಿಗಳು ಪೊಲೀಸರಿಗೆ ಕ್ಯಾರೇ ಎನ್ನಲ್ಲಿಲ್ಲ.   ನೂಕುನುಗ್ಗಲಿನಿಂದ ಸಮಾರಂಭಕ್ಕೆ ಹಾಕಿದ್ದ ಚೇರ್, ಟೇಬಲ್, ಸೋಫಾ ಸೆಟ್, ಬ್ಯಾರಿಕೇಡ್, ಎಲ್ ಇಡಿ ಟಿವಿ  ಸೇರಿದಂತೆ ಎಲ್ಲವು ಪೀಸ್ ಪೀಸ್ ಆದವು.

d51ad6e3 8637 4e3a bd18 6a0393384928

ಅಭಿಮಾನಿ ನಿಯಂತ್ರಿಸಲು ಸ್ವತಃ ಕಿಚ್ಚ ಸುದೀಪ್ ಮುಂದಾದರು. ಕೊನೆಗೆ ನೂನುನುಗ್ಗಲು ಮಧ್ಯೆಯೇ ವಾಲ್ಮೀಕಿ ರತ್ನ ಪ್ರಶಸ್ತಿ ಪಡೆದುಕೊಂಡರು.  ಪ್ರಶಸ್ತಿ ಒಂದು ಲಕ್ಷ ನಗದು ಬಹುಮಾನವನ್ನೊಳಗೊಂಡಿದೆ. ಪ್ರಶಸ್ತಿ ನೀಡಿದಕ್ಕೆ ಸ್ವಾಮೀಜಿಗೆ ಧನ್ಯವಾದ ಹೇಳಿದರು. ಹೊಸ ಸಿನಿಮಾ ಹಾಡಿನ ಸಾಲುಗಳನ್ನು ಹೇಳಿ ಅಭಿಮಾನಿಗಳನ್ನು ರಂಜಿಸಿದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *