ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳ ರಾಷ್ಟ್ರೀಯ ಯುವಜನ ಉತ್ಸವಕ್ಕೆ ಆಯ್ಕೆಯಾಟಗಿದ್ದಾರೆ ಎಂದು ದಾವಣಗೆರೆವಿಶ್ವವಿದ್ಯಾನಿಲಯ ವಿದ್ಯಾರ್ಥಿ ಕೂಟದ ಅಧ್ಯಕ್ಷ ಪ್ರೊ. ಎಸ್.ಶಿಶುಪಾಲ ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನಡೆದ
ಆಗ್ನೇಯ ವಲಯದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ಪೋಸ್ಟ್ ಮೇಕಿಂಗ್ ವಿಭಾಗದಲ್ಲಿ ಫೈನ್ ಆರ್ಟ್ಸ್ ಕಾಲೇಜಿನ ಸಿದ್ದಪ್ಪ ಕರಡಗಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೆಯೇ ಕೇ ಮಾಡಲಿಂಗ್
ವಿಭಾಗದಲ್ಲಿ ಫೈನ್ ಆರ್ಟ್ಸ್ ಕಾಲೇಜಿನ ವಿನೋದ್ ಆರ್ ಅವರು ತೃತೀಯ ಸ್ಥಾನ ಪಡೆದು ಇಬ್ಬರೂ ವಿದ್ಯಾರ್ಥಿಗಳು 2025 ರಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.
ಇನ್ಸ್ಟಾಲೇಷನ್ ವಿಭಾಗದಲ್ಲಿ ವಿನೋದ್, ಅಕ್ಷತಾ ವೆಂಕಟೇಶ್, ವಿನೋದ್ ಆರ್, ಸಂದೀಪ್ ಎಂ ಪಾಟೀಲ್, ಆನ್ ದಿ ಸ್ಪಾಟ್ ಪೇಂಟಿಂಗ್ ವಿಭಾಗದಲ್ಲಿ ಫೈನ್ ಆರ್ಟ್ಸ್ ಕಾಲೇಜಿನ ಐಶ್ವರ್ಯ
ಎಸ್. ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಮೈಮ್ ಸ್ಪರ್ಧೆಯಲ್ಲಿ ಸ್ನಾತಕೋತ್ತರ ಪ್ರಾಣಿಶಾಸ್ತ್ರ ವಿಭಾಗದ ಯು.ಕೆ.ಐಶ್ವರ್ಯ, ಎಂ.ಆರ್. ದೀಪಾ, ನಿವೇದಿತಾ, ಜಯದೇವ ಮತ್ತು ಚೇತನ್ 4ನೇ ಸ್ಥಾನ ಪಡೆದಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದಿಂದ ಆಯ್ಕೆಯಾದ 46 ವಿದ್ಯಾರ್ಥಿಗಳನ್ನು ಡಾ. ನಾಗಭೂಷಣ್ ಗೌಡ ಮತ್ತು ಡಾ. ಜ್ಯೋತಿ ನೇತೃತ್ವದಲ್ಲಿ ಯುವಜನೋತ್ಸವಕ್ಕೆ ಕಳುಹಿಸಲಾಗಿತ್ತು.



