ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಪದವಿಯ ವಿವಿಧ ಕೋರ್ಸ್ ಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅವಧಿಯನ್ನು ನ. 18 ರವರೆಗೆವಿಸ್ತರಿಸಲಾಗಿದೆ.
ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ ಕ್ಯಾಂಪಸ್, ಚಿತ್ರದುರ್ಗದ ಜಿ.ಆರ್ ಹಳ್ಳಿ ಸ್ನಾತಕೋತ್ತರ ಕೇಂದ್ರ ಜ್ಞಾನಗಂಗೋತ್ರಿ ಸೇರಿ ಎಲ್ಲ ಸ್ನಾತಕೋತ್ತರ ಕೇಂದ್ರಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನ.18 ಕೊನೆದಿನವಾಗಿದ್ದು, ನ. 21 ರಂದು ಪ್ರವೇಶ ಪರೀಕ್ಷೆನಡೆಯಲಿದೆ ಎಂದು ಕುಲಸಚಿವೆ ಬಿ.ಬಿ.ಸರೋಜಾತಿಳಿಸಿದ್ದಾರೆ.



