Connect with us

Dvgsuddi Kannada | online news portal | Kannada news online

ಉಚ್ಚಂಗಿದುರ್ಗ: ಶ್ರೀ ಉತ್ಸವಾoಭ ದೇವಿ ಹುಂಡಿ ಎಣಿಕೆ;  26,04 ಲಕ್ಷ ಸಂಗ್ರಹ

ದಾವಣಗೆರೆ

ಉಚ್ಚಂಗಿದುರ್ಗ: ಶ್ರೀ ಉತ್ಸವಾoಭ ದೇವಿ ಹುಂಡಿ ಎಣಿಕೆ;  26,04 ಲಕ್ಷ ಸಂಗ್ರಹ

ಉಚ್ಚಂಗಿದುರ್ಗ:  ಐತಿಹಾಸಿಕ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಇಂದು (ಏ.22)  ಕಾಣಿಕೆ ಹುಂಡಿ ಎಣಿಕೆ ನಡೆಸಲಾಯಿತು. ಹುಂಡಿಯಲ್ಲಿ23,74,330 ರೂಪಾಯಿ  ಸಂಗ್ರಹವಾಗಿದ್ದು, ದಾಸೋಹ ಹುಂಡಿಯಲ್ಲಿ 2,29,800 ರೂ. ಸೇರಿ ಒಟ್ಟು 26,04130 ರೂ. ಸಂಗ್ರಹವಾಗಿದೆ ಎಂದು ಶ್ರೀ ಉತ್ಸವಾoಭ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್.  ಮಲ್ಲಪ್ಪ ತಿಳಿಸಿದ್ದಾರೆ.

ಕೊರೊನ ಸೋಂಕು ಹೆ್ಚ್ಚಿದ ಹಿನ್ನೆಲೆ ಈ ಬಾರಿ ಯುಗಾದಿ ಜಾತ್ರೆ ಹಾಗೂ ಭರತ ಹುಣ್ಣಿಮೆಯಲ್ಲಿ ದೇವಿ  ದರ್ಶನಕ್ಕೆ ಅವಕಾಶ ಕಲ್ಪಿಸಿರಲಿಲ್ಲ.  ಹೀಗಾಗಿ ಈ ಬಾರಿ ಹಿನ್ನೆಲೆಯಲ್ಲಿ ಹುಂಡಿಯಲ್ಲಿನ ಕಾಣಿಕೆ ಕಡಿಮೆಯಾಗಿದೆ. ಹುಂಡಿ ಎಣಿಕೆ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 6 ರವರೆಗೆ ನಡೆಯಿತು. ಉಚ್ಚೆಂಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಒಟ್ಟು 26,04130 ರೂಪಾಯಿಗಳನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.

ಈ  ಸಂದರ್ಭದಲ್ಲಿ ಶ್ರೀ ಉಚ್ಚoಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ, ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಸೋಮಶೇಖರ್, ಅರ್ಚಕರಾದ ಎಂ ಹಾಲೇಶ್, ಗುಮಾಸ್ತ ರಮೇಶ್, ಪೊಲೀಸ್ ಇಲಾಖೆ, ಸೇವಾದಳ ಹಾಗೂ ಮುಜುರಾಯಿ ಇಲಾಖೆ ಸಿಬ್ಬಂದಿಗಳು, ಅರ್ಚಕರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top