ನೈರುತ್ಯ ರೈಲ್ವೆ: ವಿಜಯಪುರ-ಕೊಟ್ಟಾಯಮ್‌ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಓಡಿಸಲು ನಿರ್ಧಾರ; ಈ ರೈಲು ದಾವಣಗೆರೆ ಎಷ್ಟು ಗಂಟೆಗೆ ಬರಲಿದೆ ಗೊತ್ತಾ…?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ; ನೈರುತ್ಯ ರೈಲ್ವೆಯು ರೈಲು ಸಂಖ್ಯೆ 07385/07386 ವಿಜಯಪುರ-ಕೊಟ್ಟಾಯಮ್‌-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 07385 ವಿಜಯಪುರ-ಕೊಟ್ಟಾಯಮ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌, ನವೆಂಬರ್ 21ರಿಂದ 2023ರ ಜನವರಿ 30ರವರೆಗೆ ವಿಜಯಪುರದಿಂದ ಪ್ರತಿ ಸೋಮವಾರದಂದು ರಾತ್ರಿ 11.00 ಗಂಟೆಗೆ ಹೊರಡಲಿದ್ದು, ಮೂರನೇ ದಿನ (ಬುಧವಾರ) ಬೆಳಗಿನ ಜಾವ 2.20 ಗಂಟೆಗೆ ಕೊಟ್ಟಾಯಮ್ ತಲುಪಲಿದೆ.

ಈ ರೈಲಿಗೆ ಬಸವನ ಬಾಗೇವಾಡಿ ರೋಡ್ (11.36 PM), ಆಲಮಟ್ಟಿ (11.57 PM), ಬಾಗಲಕೋಟೆ (12.50 AM), ಬಾದಾಮಿ (01.14 AM), ಹೊಳೆ ಆಲೂರು (01.35 AM), ಗದಗ (02.55 AM), ಎಸ್.ಎಸ್.ಎಸ್ ಹುಬ್ಬಳ್ಳಿ (05.00 AM), ರಾಣಿಬೆನ್ನೂರು (07.07 AM), ಹರಿಹರ (07.29 AM), ದಾವಣಗೆರೆ (07.43), ಬೀರೂರು (09.10 AM), ಅರಸೀಕೆರೆ (09.35), ತಿಪಟೂರು (10.26), ತುಮಕೂರು (11.30), ಯಲಹಂಕ (01.30/02.00 PM), ಕೃಷ್ಣರಾಜಪುರಂ (02.23 PM), ಬಂಗಾರಪೇಟೆ (03.13), ಸೇಲಂ (05.22 PM), ಈರೋಡ್ (06.20 PM), ತಿರುಪ್ಪೂರ್ (06.58 PM), ಕೊಯಮತ್ತೂರು (08.07 PM), ಪಾಲಕ್ಕಾಡ್ (09.35 PM), ತ್ರಿಶೂರ್ (11.22 PM) ಮತ್ತು ಎರ್ನಾಕುಲಂ ಟೌನ್ (12.40 AM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07386 ಕೊಟ್ಟಾಯಮ್-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ನವೆಂಬರ್ 23 ರಿಂದ 2023ರ ಫೆಬ್ರವರಿ 1 ರವರೆಗೆ ಕೊಟ್ಟಾಯಮ್ ನಿಲ್ದಾಣದಿಂದ ಪ್ರತಿ ಬುಧವಾರದಂದು ಮಧ್ಯಾಹ್ನ 03.30 ಗಂಟೆಗೆ ಹೊರಡಲಿದ್ದು, ಮರುದಿನ ರಾತ್ರಿ 08:30 ಗಂಟೆಗೆ ವಿಜಯಪುರ ನಿಲ್ದಾಣ ತಲುಪಲಿದೆ.

ಈ ರೈಲು ಎರ್ನಾಕುಲಂ ಟೌನ್ (05.10 PM), ತ್ರಿಶೂರ್ (06.27 PM), ಪಾಲಕ್ಕಾಡ್ (09.37 PM), ಕೊಯಮತ್ತೂರು (11.17 PM), ತಿರುಪ್ಪೂರ್ (12.03 AM), ಈರೋಡ್ (12.50 AM), ಸೇಲಂ (01.47 AM), ಬಂಗಾರಪೇಟೆ (04.40 AM), ಕೃಷ್ಣರಾಜಪುರಂ (05.38 AM), ಯಲಹಂಕ (06.55 AM), ತುಮಕೂರು (08.10 AM), ತಿಪಟೂರು (09.34 AM), ಅರಸೀಕೆರೆ (10.15 AM), ಬೀರೂರು (11.05 AM), ದಾವಣಗೆರೆ (12.25 PM), ಹರಿಹರ (12.39 PM), ರಾಣೆಬೆನ್ನೂರು (01.00 PM), ಎಸ್.ಎಸ್.ಎಸ್ ಹುಬ್ಬಳ್ಳಿ (02.50 PM), ಗದಗ (04.15 PM), ಹೊಳೆ ಆಲೂರು (05.07 PM), ಬಾದಾಮಿ (05.27 PM), ಬಾಗಲಕೋಟೆ (06.00 PM), ಆಲಮಟ್ಟಿ (06.42 PM) ಮತ್ತು ಬಸವನ ಬಾಗೇವಾಡಿ ರೋಡ (07.09 PM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ಈ ವಿಶೇಷ ರೈಲುಗಳು ಒಟ್ಟು ೧೫ ಬೋಗಿಗಳನ್ನು ಹೊಂದಿರುತ್ತವೆ. ಒಂದು 2ನೇ ಹವಾನಿಯಂತ್ರಿತ ದರ್ಜೆ, ಎರಡು 3ನೇ ಹವಾನಿಯಂತ್ರಿತ ದರ್ಜೆ, ಹತ್ತು ಸ್ಲೀಪರ್ ಕ್ಲಾಸ್ ಮತ್ತು ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್‌ಗಳಿಂದ ಕೂಡಿದ ದ್ವಿತೀಯ ದರ್ಜೆ ಲಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ಗಳನ್ನು ಒಳಗೊಂಡಿರುತ್ತದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *