ದಾವಣಗೆರೆ: ಸೆಪ್ಟೆಂಬರ್ 5 ರಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 18 ಶಿಕ್ಷಕರಿಗೆ ಗೌರವಿಸಿ ಸನ್ಮಾನಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್ ತಿಳಿಸಿದ್ದಾರೆ.
ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆಯುವ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ, ಹಿರಿಯ ಶಾಲಾ ವಿಭಾಗದಿಂದ 12 ಮತ್ತು ಪ್ರೌಢಶಾಲಾ ವಿಭಾಗದಿಂದ 6 ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುವುದು.
ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು
ಕಿರಿಯ ಪ್ರಾಥಮಿಕ ಶಾಲಾ ವಿಭಾಗ
- ಚನ್ನಗಿರಿ ತಾಲ್ಲೂಕಿನ ಸಂತೆ ಮೈದಾನದ ಸರ್ಕಾರಿ ಉ.ಹಿ.ಪ್ರಾಥಮಿಕ ಶಾಲೆಯ ಸ.ಶಿ. ಮೊಹಮ್ಮದ್ ಮುಹೀಬ್ ಉಲ್ಲಾ
- ದಾವಣಗೆರೆ ಉತ್ತರ ವಲಯ ಹೆಬ್ಬಾಳು ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ.ಶಿಕ್ಷಕಿ ಗಾಯಿತ್ರಿ ಬಿ. ಐರಣಿ
- ದಾವಣಗೆರೆ ದಕ್ಷಿಣವಲಯದ ಕಾವೇರಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ.ಶಿ.ಅಕ್ಕಮಹಾದೇವಿ.ಕೆ.ಎಂ
- ಹರಿಹರ ತಾಲ್ಲೂಕಿನ ಮಲೆಬೆನ್ನೂರು ಗ್ರಾಮದ ಶ್ರೀಮಾರುತಿ ಅನುದಾನಿತ ಹಿರಿಯ ಪಾಥಮಿಕ ಶಾಲೆಯ ಸ.ಶಿ.ಪರಮೇಶ್ವರಪ್ಪ
- ಹೊನ್ನಾಳಿ ತಾಲ್ಲೂಕಿನ ಸದಾಶಿವಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ.ಶಿ.ಮಲ್ಲಿಕಾರ್ಜುನ್ ಬಡಿಗೇರ್
- ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ.ಶಿ.ಪುಪ್ಪಾಲತಾ.ಎಸ್.ಎನ್
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
- ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸ.ಶಿ.ಮಂಜುನಾಥ ಕೆ.ಬಿ
- ದಾವಣಗೆರೆ ಉತ್ತರ ವಲಯದ ಹಳೇ ಊರು ದುಗ್ಗಮ್ಮನ ಪೇಟೆಯ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕ ಹನುಮಂತ ನಾಯ್ಕ
- ದಾವಣಗೆರೆ ದಕ್ಷಿಣ ವಲಯದ ಕೋಲ್ಕುಂಟೆ ಸ.ಹಿ.ಪ್ರಾ ಶಾಲೆಯ ವೀರೇಶ್
- ಹರಿಹರ ತಾಲ್ಲೂಕಿನ ಕೊಕ್ಕನೂರು ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕ ಶ್ರೀಕಾಂತಚಾರಿ ಜೆ.ಜಿ
- ಹೊನ್ನಾಳಿ ತಾಲ್ಲೂಕಿನ ಕಮ್ಮಾರಗಟ್ಟೆ ಗ್ರಾಮದ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕ ಕುಮಾರ್ ನಾಯ್ಕ್
- ಜಗಳೂರು ತಾಲ್ಲೂಕಿನ ತೋರಣಗಟ್ಟೆ ಸ.ಹಿ.ಪ್ರಾ ಶಾಲೆಯ ಸಹಶಿಕ್ಷಕ ರಂಗಪ್ಪ ವೆಂಕಪ್ಪನವರ್ ಇವರು ಆಯ್ಕೆ ಹೊಂದಿದ್ದಾರೆ.
ಪ್ರೌಢಶಾಲಾ ವಿಭಾಗ
- ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಬಾಲಿಕ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣಮೂರ್ತಿ.ಹೆಚ್
- ದಾವಣಗೆರೆ ಉತ್ತರ ವಲಯದ ಸರ್ಕಾರಿ ಪ್ರೌಢಶಾಲೆಯ ಸ.ಶಿ ವೀರೇಶ್.ಪಿ
- ದಾವಣಗೆರೆ ದಕ್ಷಿಣ ವಲಯದ ಶ್ರೀ ತರಳಬಾಳು ಜಗದ್ಗುರು ಪ್ರೌಢಶಾಲೆಯ ಅನುಭವ ಮಂಟಪದ ಶರತ್ ಆರ್
- ಹರಿಹರ ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸ.ಶಿ ಸಂತೋಷ ನೂಲಗೇರಿ
- ಹೊನ್ನಾಳಿ ತಾಲ್ಲೂಕಿ ಹಿರೇಗೋಣಿಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸ.ಶಿ ವಿಜಯ್ ಸೊಲ್ಲಾಪುರ
- ಜಗಳೂರು ತಾಲ್ಲೂಕಿನ ಗೌರಿಪುರದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕಕರಿಬಸಪ್ಪ ಎಚ್. ಎಂ



