ದಾವಣಗೆರೆ: ತಾಲ್ಲೂಕಿನ ಅಸಗೋಡು ಹೋಬಳಿಯ ಗುಡಾಳು ಗ್ರಾಮದಲ್ಲಿ ಇತ್ತೀಚಿಗೆ ಅಕಾಲಿಕ ಆಲೀಕಲ್ಲು ಮಳೆಯಿಂದ ಹಾನಿಗೀಡಾದ ತೋಟಗಾರಿಕೆ ಬೆಳೆಗಳ ಕ್ಷೇತ್ರಕ್ಕೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ. ಬಸವನಗೌಡ ಎಂ.ಜಿ. ಭೇಟಿ ನೀಡಿ ಪರಿಶೀಲಿಸಿದರು.
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ
ಅಕಾಲಿಕ ಮಳೆಯಿಂದಾಗಿ ಅಡಿಕೆ, ಬಾಳೆ, ಮಾವು, ಪಪ್ಪಾಯ ಬೆಳೆಗಳಿಗೆ ಹಾನಿಯಾಗಿದ್ದು, ಗಿಡಗಳ ಎಲೆಗಳು ಚದುರಿರುವುದು, ಕಾಂಡಕ್ಕೆ ಏಟು ಬಿದ್ದಿರುವುದು, ಮಾವಿನ ತೋಟದಲ್ಲಿ ಹಣ್ಣುಗಳು ಉದುರಿರುವುದು, ಬಾಳೆ ಗಿಡಗಳು ಉರುಳಿ ಬಿದ್ದಿರುವುದನ್ನು ರೈತರೊಂದಿಗೆ ಸಮೀಕ್ಷೆ ನೆಡೆಸಿದರು.
ಈ ಮಳೆಯಿಂದಾಗಿ ಗಿಡಗಳಿಗೆ ಭೌತಿಕವಾಗಿ ಹಾನಿಯಾಗಿರುವುದರಿಂದ ಅವುಗಳು ಪುನಶ್ವೇತನವಾಗಲು ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಶೀಘ್ರ ಚೇತರಿಕೆಗಾಗಿ ಹಾನಿಗೊಳಗಾದ ತಾಕುಗಳಿಗೆ ತಕ್ಷಣವೇ ಲಘುಪೋಷಕಾಂಶ 5 ಮಿಲಿ, 19:19:19 ಪೋಷಕಾಂಶ 5 ಗ್ರಾಂ. ಮತ್ತು ಕ್ಯೂಟ್ರೋಫಿಕ್ಸ್ ಶಿಲೀಂದ್ರನಾಶಕವನ್ನು 2 ಗ್ರಾಂ ಪ್ರತೀ ಲೀಟರ್
ನೀರಿನಲ್ಲಿ ಬೆರಸಿ ಸಿಂಪಡಿಸಬೇಕೆಂದರು. ಬರುವ ತಿಂಗಳು ಇನ್ನೂ ಉಷ್ಣಾಂಶ ಹೆಚ್ಚಾಗುವ ಸಂಭವವಿರುವುದರಿಂದ ತೋಟಗಳಲ್ಲಿ ಉಳುಮೆಯನ್ನು ಮಾಡಬಾರದು ಹಾಗೂ ಮಣ್ಣು ಪರೀಕ್ಷೆ ಮಾಡಿಸಲು ಸೂಕ್ತ ಸಮಯವಿದ್ದು, ರೈತರೆಲ್ಲಾ ಇದರ ಬಗ್ಗೆ ಗಮನಹರಿಸಬೇಕೆಂದರು.
ಗ್ರಾಮದ 20 ಕ್ಕೂ ಹೆಚ್ಚು ಹಾನಿಗೊಳಗಾದ ತಾಕುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರಾದ ಶ್ರೀ ಬಾಪುಗೌಡ, ವಿನಯ್, ಕಲ್ಲೇಶ್, ಕುಬೇಂದ್ರ, ಪ್ರಕಾಶ್, ಪ್ರದೀಪ್, ಅಣ್ಣಪ್ಪ, ನಾಗರಾಜ, ವಿಧ್ಯಾಸಾಗರ್ ಇತರರು ಹಾಜರಿದ್ದರು.



