ದಾವಣಗೆರೆ: ಸುಬಿಕ್ಷಾ ಫೌಂಡೇಶನ್ ವತಿಯಿಂದ ಕೊವಿಡ್-19 ಜಾಗೃತಿ ಅಭಿಯಾನ ಮತ್ತು ಮಾಸ್ಕ್ ಜಾಗೃತಿ ಅಭಿಯಾನ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಎಸ್ಪಿ ಹನುಮಂತರಾಯ ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರದ ರೈತ ಭವನದ ಬಳಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಸ್ಕ್ ಜಾಗೃತಿ ಅಭಿಯಾನದಲ್ಲಿ 500 ಕ್ಕೂ ಹೆಚ್ಚು ಜನರಿಗೆ ಮಾಸ್ಕ್ ವಿತರಿಸಲಾಯಿತು. ಮಾರುಕಟ್ಟೆಗೆ ಮಾಸ್ಕ್ ಇಲ್ಲದೆ ಬಂದ ಗ್ರಾಹಕರು, ವ್ಯಾಪಾರಿಗಳಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹನುಮಂತರಾಯ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಆರೋಗ್ಯ ವಿಚಾರದಲ್ಲಿ ಮರೆವು ಇರಬಾರದ. ಮಾಸ್ಕ್ ಹಾಕಿಕೊಂಡು ಬರದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ , ಸೌಮ್ಯ ಮಂಜುನಾಥ್ ಜಾಧವ್ , ಆಶಾ ಮರಿಯೋಜಿರಾವ್ , ಭಾಗ್ಯ ಪಿಸಾಳೆ , ಶ್ವೇತಾ ಸೋಮಶೇಖರ್ ಉಪಸ್ಥಿತರಿದ್ದರು.



