ದಾವಣಗೆರೆ: ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು , ಮಾ.3 ರಂದು ನಡೆದ ವ್ಯವಹಾರ ಅಧ್ಯಯನ, ಗಣಿತ ಹಾಗೂ ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ ವಿಷಯದ ಪರೀಕ್ಷೆಗಳಿಗೆ 162 ವಿದ್ಯಾರ್ಥಿಗಳು ಗೈರು ಆಗಿದ್ದಾರೆ.
ದಾವಣಗೆರೆ: ದತ್ತು ಸ್ವೀಕಾರ ಕೇಂದ್ರದ 2ನೇ ಘಟಕಕ್ಕೆ ಚಾಲನೆ; ದತ್ತು ಸ್ವೀಕಾರಕ್ಕೆ ಈ ರೀತಿ ಮಾಡಿ..
ವ್ಯವಹಾರ ಅಧ್ಯಯನ ವಿಷಯಕ್ಕೆ ಒಟ್ಟು 4112 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇದರಲ್ಲಿ 3950 ವಿದ್ಯಾರ್ಥಿಗಳು ಹಾಜರಾಗಿ 162 ಗೈರು ಹಾಜರಾಗಿರುತ್ತಾರೆ. ಗಣಿತ ವಿಷಯದ ಪರೀಕ್ಷೆಗೆ ಒಟ್ಟು 11656 ವಿದ್ಯಾರ್ಥಿಗಳು ನೋಂದಾಯಿಸಿದ್ದು,11549 ವಿದ್ಯಾರ್ಥಿಗಳು ಹಾಜರಾಗಿ, 107 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ.
ದಾವಣಗೆರೆ: ಅಂತರ್ ಜಿಲ್ಲೆಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 10.30 ಲಕ್ಷ ಮೌಲ್ಯದ ಸ್ವತ್ತು ವಶ
ಶಿಕ್ಷಣ ಶಾಸ್ತ್ರ ವಿಷಯವನ್ನು 680 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು, ಇದರಲ್ಲಿ 426 ವಿದ್ಯಾರ್ಥಿಗಳು ಹಾಜರಾಗಿ, 54 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ. ತರ್ಕಶಾಸ್ತ್ರವನ್ನು 46 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು, ಇವರಲ್ಲಿ 42 ವಿದ್ಯಾರ್ಥಿಗಳು ಹಾಜರಾಗಿ, 4 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕರಿಸಿದ್ದಪ್ಪ ತಿಳಿಸಿದ್ದಾರೆ.



