ದಾವಣಗೆರೆ: ದಾವಣಗೆರೆ ಗ್ರಾಮೀಣ ಉಪ ವಿಭಾಗ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿನ 11 ಕೆವಿ ಬ್ಯಾಂಕ್-2 ನ ವಿಫಲವಾಗಿರುವ ಟಿ.ಸಿ ಯನ್ನು ಬದಲಾಯಿಸಲು ಹಾಗೂ ಹೋಗಿರುವ ಟಿ.ಸಿ ವೈರಿಂಗ್ ಸರಿಪಡಿಸಲು ತರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.28 ರಂದು ಮಧ್ಯಾಹ್ನ 01 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಸರಬರಾಜಾಗುವ 11ಕೆವಿ ಮಾರ್ಗಗಳಾದ ಎಫ್9- ಶಾಮನೂರು, ಎಫ್17- ಜೆ.ಹೆಚ್.ಪಿ-1, ಎಫ್16 ಜೆ.ಹೆಚ್.ಪಿ-2, ಮಾರ್ಗ ಹಾಗೂ ಶಾಮನೂರು ಹಳೆ ಕುಂದುವಾಡ, ಹೊಸ ಕುಂದುವಾಡ, ಹೌಸಿಂಗ್ ಬೋರ್ಡ್, ಜೆ.ಹೆಚ್.ಪಟೇಲ್ ಬಡಾವಣೆ, ನಾಗನೂರು, ಜರಿಕಟ್ಟೆ, ಮುದಹದಡಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



