Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು ಬೆಳಗ್ಗೆ 10 ರಿಂದ 6.30 ವರೆಗೆ ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

bescom 22

ದಾವಣಗೆರೆ

ದಾವಣಗೆರೆ: ಇಂದು ಬೆಳಗ್ಗೆ 10 ರಿಂದ 6.30 ವರೆಗೆ ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ: ದಾವಣಗೆರೆ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ವಿದ್ಯುತ್ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಎಫ್-21 ತರಳುಬಾಳು ಫೀಡರ್ ಗ್ರಾಮಗಳಾದ ಶಿರಮಗೊಂಡನಹಳ್ಳಿ, ನಾಗನೂರು, ಹೊಸ ಬಿಸಿಲೇರಿ, ಹಳೇ ಬಿಸಿಲೇರಿ, 6ನೇ ಕಲ್ಲು, 7 ನೇ ಕಲ್ಲು ಮತ್ತು ಬನಶಂಕರಿ ಬಡಾವಣೆ 2 ನೇ ಹಂತ, ಜೆಎಚ್‍ಪಿ-01 ಫೀಡರ್ ಗ್ರಾಮಗಳಾದ, ಹೊಸ ಕುಂದವಾಡ, ಹಳೇಕುಂದವಾಡ, ಕೆಎಚ್‍ಬಿ ಕಾಲೋನಿ, ರಶ್ಮಿ ಸ್ಕೂಲ್ ಸುತ್ತ ಮುತ್ತ, ಮತ್ತು ಕುಕ್ಕುವಾಡ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಮಾರ್ಗಗಳಿಗೆ ಇಂದು ಜ.06 ರಂದು ಬೆಳಗ್ಗೆ 10 ಗಂಟೆಯಿಂದ 06.30 ಗಂಟೆಯವರೆಗೆ ವಿದ್ಯುತ್  ವ್ಯತ್ಯಯವಾಗಲಿದೆ.

ಜಗಳೂರು ಉಪವಿಭಾಗ ವ್ಯಾಪ್ತಿಯ 66/11 ಕೆವಿ ಬಿದರಕೆರೆ ವಿದ್ಯುತ್ ಮಾರ್ಗದ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿದ್ದು, ಕಾಮಗಾರಿಗೆ ಸಂಬಂಧಿಸಿದಂತೆ ಬಿದರಕೆರೆ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳು ಮತ್ತು ನೀರಾವರಿ ಪಂಪ್‍ಸೆಟ್ಟು ಮಾರ್ಗಗಳಿಗೆ ಜ.06 ರಂದು ಬೆಳಗ್ಗೆ 10 ರಿಂದ ಸಂಜೆ 05 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top