ದಾವಣಗೆರೆ: ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಸರಸ್ವತಿ ಫೀಡರ್ನಲ್ಲಿ ಕೆ.ಯು.ಐ.ಡಿ.ಎಫ್.ಸಿ./ ಬೆ.ವಿ.ಕಂ.ವತಿಯಿಂದ ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ಧ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.27 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸರಸ್ವತಿ ಫೀಡರ್ನ ವ್ಯಾಪ್ತಿಯ ಸರಸ್ವತಿ ಬಡಾವಣೆ ಎ ಮತ್ತು ಬಿ ಬ್ಲಾಕ್, ಜಯನಗರ ಎ,ಬಿ& ಸಿ ಬ್ಲಾಕ್ ಭೂಮಿಕ ನಗರ ಜೆ.ಎನ್ ಕಾನ್ವೇಂಟ್ ಕೆಎಸ್ಎಸ್ ಕಾಲೇಜ್ ಮತ್ತು ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಎಸ್.ವಿ.ಟಿ . ಫೀಡರ್ ಎಫ್1 ವ್ಯಾಪ್ತಿಯ ಶ್ರೀನಿವಾಸ್ ನಗರ 1ನೇ ಅಡ್ಡರಸ್ತೆ ಯಿಂದ 6ನೇ ಅಡ್ಡರಸ್ತೆಯವರಿಗೆ, ಭದ್ರ ಕಾಲೊನಿ, ಹದಡಿ ರೋಡ್, ಇನ್ಕಂಟ್ಯಾಕ್ಸ್ ಬಿಲ್ಡಿಂಗ್, ಡಿಆರ್ಆರ್ ಹಾಸ್ಟಲ್, ಅನುಭವ ಮಂಟಪ ಸ್ಕೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



