ದಾವಣಗೆರೆ: ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಜಿ.ಅಂಡ್ಎಸ್ ಫೀಡರ್ ಮತ್ತು ತ್ರಿಶೂಲ್ ಫೀಡರ್ ರಂಗನಾಥ ಫೀಡರ್ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಇಂದು (ಡಿ.03) ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಜಿ. ಅಂಡ್ಎಸ್ ಫೀಡರ್ ಪಿ.ಬಿ. ರಸ್ತೆ., ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಪಿ.ಬಿ ರೋಡ್ ಬಿಲಾಲ್ ಕಂಪೌಡ್, ಈರುಳ್ಳಿ ಮಾರ್ಕೆಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ತ್ರಿಶೂಲ್ ಫೀಡರ್ ವ್ಯಾಪ್ತಿಯ ಪಿ ಬಿ ರೋಡ್, ರಿಲಯನ್ಸ ಮಾರ್ಕೆಟ್, ಸುಲ್ತಾನ್ ಡೈಮೈಂಡ್ಸ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು
ರಂಗನಾಥ ಫೀಡರ್ ವ್ಯಾಪ್ತಿಯ ತರಳಬಾಳು ಬಡಾವಣೆ, 1,2 ಮತ್ತು 3ನೇ ಮುಖ್ಯರಸ್ತೆ, ವಿನಾಯಕ ಬಡಾವಣೆ, ವಿದ್ಯಾನಗರ ಪಾರ್ಕ, ಹದಡಿ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



