ದಾವಣಗೆರೆ: ಯರಗುಂಟ ವಿದ್ಯುತ್ ವಿತರಣಾ ಕೇಂದ್ರದ ಅಮೃತನಗರ ಮಾರ್ಗದಲ್ಲಿ ಮಳೆ-ಗಾಳಿಗೆ ಶಿಥಿಲಗೊಂಡ ಕಂಬಗಳನ್ನು ಬದಲಾಯಿಸಲು, ಮಧ್ಯಂತರ ಕಂಬಗಳನ್ನು ಅಳವಡಿಸಲು ಮತ್ತು ಫೀಡರ್ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಇಂದು (ಡಿ.02) ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಎಫ್-14 ಯರಗುಂಟ ಮತ್ತು ಎಫ್-17 ಅಮೃತನಗರ ಮಾರ್ಗದ ಗ್ರಾಮಗಳಾದ ಯರಗುಂಟ, ಅಶೋಕನಗರ, ಕರೂರು, ಶಿವಪುರ, ದೊಡ್ಡಬೂದಿಹಾಳ್, ಚಿಕ್ಕಬೂದಿಹಾಳ್, ದೇವರಹಟ್ಟಿ ಬಿ.ಕಲ್ಪನಹಳ್ಳಿ, ಅಮೃತನಗರ, ಭೂಸವನಹಟ್ಟಿ, ಮತ್ತು ಚಿತ್ತನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



