ದಾವಣಗೆರೆ: 66/11 ಕಾಡಜ್ಜಿ ವಿ.ವಿ. ಕೇಂದ್ರದಿಂದ ಹೊರಡುವ ವಿದ್ಯುತ್ ಮಾರ್ಗದ ಮುಕ್ತತೆಯನ್ನು ತೆಗೆದುಕೊಳ್ಳುವುದರಿಂದ ಆಗಸ್ಟ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಾಡಜ್ಜಿ, ರಾಂಪುರ, ನಾಗರಕಟ್ಟೆ, ಬಸವನಾಳು, ಬಸವನಾಳುಗೊಲ್ಲರಹಟ್ಟಿ, ಬೇತೂರು, ಪುಟಗನಾಳು ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಆಗಸ್ಟ್ 24 ರಂದು ವಿದ್ಯುತ್ ವ್ಯತ್ಯಯ
66/11 ಕೆ.ವಿ ಓಬಜ್ಜಿಹಳ್ಳಿ ವಿ.ವಿ ಕೇಂದ್ರದಿಂದ ಹೊರಡುವ ವಿದ್ಯುತ್ ಮಾರ್ಗದಲ್ಲಿ ತುರ್ತುಕಾಮಕಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಡ್ಲೆಬಾಳು, ಹೊಸಕಡ್ಲೆಬಾಳು, ಅರಸಾಪುರ, ತಳವಾರಹಟ್ಟಿ, ಮಾಗನಹಳ್ಳಿ, ಚಿಕ್ಕ ಓಬಜ್ಜಿಹಳ್ಳಿ, ದೊಡ್ಡ ಓಬಜ್ಜಿಹಳ್ಳಿ, ಬದಿಯಾನಾಯಕನ ತಾಂಡ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



