Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು ವಿವಿಧೆಡೆ ಇಂದು ವಿದ್ಯುತ್‌ ವ್ಯತ್ಯಯ; ಎರಡು ದಿನದಿಂದ ಈ ಪ್ರದೇಶದಲ್ಲಿ ಕರೆಂಟ್ ಇಲ್ಲ; ನೀರಿಲ್ಲದೆ ಜನ ಪರದಾಟ…!!

ದಾವಣಗೆರೆ

ದಾವಣಗೆರೆ: ಇಂದು ವಿವಿಧೆಡೆ ಇಂದು ವಿದ್ಯುತ್‌ ವ್ಯತ್ಯಯ; ಎರಡು ದಿನದಿಂದ ಈ ಪ್ರದೇಶದಲ್ಲಿ ಕರೆಂಟ್ ಇಲ್ಲ; ನೀರಿಲ್ಲದೆ ಜನ ಪರದಾಟ…!!

ದಾವಣಗೆರೆ: ಬೆಸ್ಕಾಂ 66/11 ಕೆವಿ ವಿ.ವಿ. ಕೇಂದ್ರ ದಾವಣಗೆರೆಯಿಂದ ಹೊರಡುವ ಮೌನೇಶ್ವರ ಫೀಡರ್, ಜಯನಗರ ಫೀಡರ್‌ಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಡ್ರೈನೆಜ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಏ.21ರಂದು ಈ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಎಚ್‌ಆರ್. ಸರ್ಕಲ್, ಕೆಇಬಿ ಕಾಲನಿ, ನಿಟುವಳ್ಳಿ ಹೊಸ ಬಡಾವಣೆ, ಮೌನೇಶ್ವರ ಬಡಾವಣೆ, ಇಎಸ್‌ಐ ಆಸ್ಪತ್ರೆ, ಕೆಟಿಜೆ ನಗರ ಪೋಲಿಸ್ ಠಾಣೆ ಮತ್ತು ಸುತ್ತಲಿನ ಪ್ರದೇಶಗಳು. ನಿಟುವಳ್ಳಿ, ದುರ್ಗಾಂಬಿಕಾ ದೇವಸ್ಥಾನ ಸುತ್ತ, 60 ಅಡಿ ರಸ್ತೆ, ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಎರಡು ದಿನದಿಂದ ಕರೆಂಟ್ ಇಲ್ಲ; ಹರಿಹರ ತಾಲ್ಲೂಕಿನ ಕುರುಬರಹಳ್ಳಿ ವಿದ್ಯುತ್ ಪೂರೈಕೆ ಕೇಂದ್ರ ವ್ಯಾಪ್ತಿಯಲ್ಲಿ ಶುಕ್ರವಾರ ಬೀಸಿದ ಬಿರು ಗಾಳಿ, ಮಳೆಗೆ ನೂರಾರು ಮರಗಳು ನೆಲಕ್ಕೆ ಉರುಳಿ ಬಿದ್ದಿದ್ದು, ಎರಡು ದಿನದಿಂದ ಕರೆಂಟ್ ಇಲ್ಲದಂತಾಗಿದೆ. ಸತತ 40 ಗಂಟೆಯಿಂದ ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ, ಕುರುಬರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಬೆಸ್ಕಾಂ ಸಿಬ್ಬಂದಿ ಎರಡು ದಿನದಿಂದ ಮರ ತೆರವು ಮಾಡುತ್ತಿದ್ದರೂ ಕೆಲಸ ಪೂರ್ಣಗೊಂಡಿಲ್ಲ ಎನ್ನುತ್ತುದ್ದಾರೆ. ಹೀಗಾಗಿ ಇವತ್ತು ಸಂಜೆ ವರೆಗೂ ವಿದ್ಯುತ್ ಬರುವ ಸಾಧ್ಯತೆ ಇಲ್ಲ‌. ಜನರು ಕುಡಿಯಲು, ಬಳಸಲು ನೀರಿಲ್ಲದೆ ಪರದಾಡುತ್ತಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top