ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕುರುಬರಹಳ್ಳಿ 66/11 ಕೆ.ವಿವಿ.ವಿ.ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ. 31 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 06:00 ಗಂಟೆಯವರೆ ವಿದ್ಯುತ್ ವ್ಯತ್ಯಯವಾಗಲಿದೆ.
ಕುರುಬರಹಳ್ಳಿ 66/11 ಕೆ.ವಿ ವಿ.ವಿ ಕೇಂದ್ರದಿಂದ ವಿತರಣೆಯಾಗುವ F5-ಚಿಕ್ಕಬಿದರಿ, F6-ನ್ಯೂ ಸಾರಥಿ, F10-ಕಲ್ಪತರು, F9-ಕೊಂಡಜ್ಜಿ NJY, F7- ಕೊಂಡಜ್ಜಿ, F8-ಕೆಂಚನಹಳ್ಳಿ, F2-ವಟಗನಹಳ್ಳಿ, ಫೀಡರ್ಗೆ ಬರುವ I P ವಲಯಗಳು ಹಾಗೂ ಗ್ರಾಮೀಣ ಪ್ರದೇಶಗಳಾದ ಚಿಕ್ಕಬಿದರಿ, ಸಾರಥಿ, ಕೊಂಡಜ್ಜಿ, ಕೆಂಚನಹಳ್ಳಿ, ಬುಳ್ಳಾಪುರ, ವಟಗನಹಳ್ಳಿ, ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಮೋಟಾರ್ ಲೈನನ್ನು ಬೆಳಗಿನಜಾವ 4 ಘಂಟೆಯಿಂದ 10 ಘಂಟೆ ತನಕ ಕೊಡಲಾಗುತ್ತದೆ. ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆ ವರೆಗೆ ಯಾವುದೇ ವಿದ್ಯುತ್ ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಬೆ.ವಿ.ಕಂ, ಹರಿಹರ ಉಪವಿಭಾಗ ರವರು ತಿಳಿಸಿದ್ದಾರೆ.



