ದಾವಣಗೆರೆ:ಎಲ್ಲಿಯೋ ಕುಳಿತುಕೊಂಡು, ಜಾತಿ ಗಣತಿ ಮಾಡಿದ್ರೆ ಒಪ್ಪುವುದಾದ್ರೂ ಹೇಗೆ?; ಕಾಂಗ್ರೆಸ್ ಶಾಸಕ ಅಸಮಾಧಾನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಎಲ್ಲಿಯೋ ಕುಳಿತುಕೊಂಡು, ಜಾತಿ ಗಣತಿ ಮಾಡಿದರೆ ಒಪ್ಪುವುದಾದರೂ ಹೇಗೆ? ನಮ್ಮ ಮನೆಗೆ ಗಣತಿಗೆ ಬಂದಿಲ್ಲ. ಇಂತಹ ವರದಿ ಹೇಗೆ ಒಪ್ಪಬೇಕು? ಎಂದು ಶಾಸಕ ಶಿವಗಂಗಾ ಬಸವರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಜಾತಿಗಣತಿ ವರದಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಶಾಸಕರ ಗಮನಕ್ಕೆ ತಂದ ನಂತರ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕಲ್ಲವೇ..?ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿ
ಬಿಡುಗಡೆಗೆ ಬಿಡುವುದಿಲ್ಲ ಎಂದರು.

ದಾವಣಗೆರೆ: ಮದುವೆ ದಿನವೇ ಮದುಮಗ ಮನೆಯಲ್ಲಿ‌ ಕಳ್ಳತನ ; ಬೀಗ ಒಡೆದು ಚಿನ್ನಾಭರಣ, 4.5 ಲಕ್ಷ ನಗದು ದೋಚಿ ಪರಾರಿ

ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸ್ವತಃ ಹೈಕಮಾಂಡ್ ಎಚ್ಚರಿಕೆ ನೀಡಿದರೂ ಸಚಿವ ಕೆ.ಎನ್.ರಾಜಣ್ಣನವರು ಮಾತನಾಡುವುದು ತಪ್ಪು.ಪವರ್‌ಶೇರಿಂಗ್ ವಿಚಾರ ಕಾಂಗ್ರೆಸ್‌
ಹೈಕಮಾಂಡ್‌ಗೆ ಬಿಟ್ಟ ವಿಚಾರ ಒಬ್ಬರ ಕೈಯಿಂದ ಬದಲಾವಣೆ ಆಗುವುದಾಗಿದ್ದರೆ ಮಾಡಬಹುದಿತ್ತು. ಆದರೆ, ಹೈಕಮಾಂಡ್
ನಿರ್ಧಾರವಾಗಿದ್ದರಿಂದ ಯಾರೂ ಮಾತನಾಡಬಾರದು. ಮಾತನಾಡುತ್ತಾ ಹೋದರೆ, ಕಾರ್ಯಕರ್ತರಲ್ಲಿ ಗೊಂದಲವಾಗುತ್ತದೆ ಎಂದರು.

ರಾಜಣ್ಣ ಮಾತನಾಡಿದ್ದು ತಪ್ಪು, ನಾವೆಲ್ಲಾ ಮೊದಲ ಸಲ ಗೆದ್ದು, ಶಾಸಕರಾಗಿದ್ದೇವೆ. ಹಿರಿಯರ‌ಹಾದಿಯಲ್ಲೇ ನಾವೂ ನಡೆಯುತ್ತೇವೆ. ಹಿರಿಯರು ತಪ್ಪು ಹಾದಿಯಲ್ಲಿ‌ ಹೋದರೆ, ನಾವೂ ತಪ್ಪುದಾರಿಯಲ್ಲೇ ಹೋದಂತಾಗುತ್ತದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *