ದಾವಣಗೆರೆ: ಎಲ್ಲಿಯೋ ಕುಳಿತುಕೊಂಡು, ಜಾತಿ ಗಣತಿ ಮಾಡಿದರೆ ಒಪ್ಪುವುದಾದರೂ ಹೇಗೆ? ನಮ್ಮ ಮನೆಗೆ ಗಣತಿಗೆ ಬಂದಿಲ್ಲ. ಇಂತಹ ವರದಿ ಹೇಗೆ ಒಪ್ಪಬೇಕು? ಎಂದು ಶಾಸಕ ಶಿವಗಂಗಾ ಬಸವರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಜಾತಿಗಣತಿ ವರದಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಶಾಸಕರ ಗಮನಕ್ಕೆ ತಂದ ನಂತರ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕಲ್ಲವೇ..?ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿ
ಬಿಡುಗಡೆಗೆ ಬಿಡುವುದಿಲ್ಲ ಎಂದರು.
ದಾವಣಗೆರೆ: ಮದುವೆ ದಿನವೇ ಮದುಮಗ ಮನೆಯಲ್ಲಿ ಕಳ್ಳತನ ; ಬೀಗ ಒಡೆದು ಚಿನ್ನಾಭರಣ, 4.5 ಲಕ್ಷ ನಗದು ದೋಚಿ ಪರಾರಿ
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸ್ವತಃ ಹೈಕಮಾಂಡ್ ಎಚ್ಚರಿಕೆ ನೀಡಿದರೂ ಸಚಿವ ಕೆ.ಎನ್.ರಾಜಣ್ಣನವರು ಮಾತನಾಡುವುದು ತಪ್ಪು.ಪವರ್ಶೇರಿಂಗ್ ವಿಚಾರ ಕಾಂಗ್ರೆಸ್
ಹೈಕಮಾಂಡ್ಗೆ ಬಿಟ್ಟ ವಿಚಾರ ಒಬ್ಬರ ಕೈಯಿಂದ ಬದಲಾವಣೆ ಆಗುವುದಾಗಿದ್ದರೆ ಮಾಡಬಹುದಿತ್ತು. ಆದರೆ, ಹೈಕಮಾಂಡ್
ನಿರ್ಧಾರವಾಗಿದ್ದರಿಂದ ಯಾರೂ ಮಾತನಾಡಬಾರದು. ಮಾತನಾಡುತ್ತಾ ಹೋದರೆ, ಕಾರ್ಯಕರ್ತರಲ್ಲಿ ಗೊಂದಲವಾಗುತ್ತದೆ ಎಂದರು.
ರಾಜಣ್ಣ ಮಾತನಾಡಿದ್ದು ತಪ್ಪು, ನಾವೆಲ್ಲಾ ಮೊದಲ ಸಲ ಗೆದ್ದು, ಶಾಸಕರಾಗಿದ್ದೇವೆ. ಹಿರಿಯರಹಾದಿಯಲ್ಲೇ ನಾವೂ ನಡೆಯುತ್ತೇವೆ. ಹಿರಿಯರು ತಪ್ಪು ಹಾದಿಯಲ್ಲಿ ಹೋದರೆ, ನಾವೂ ತಪ್ಪುದಾರಿಯಲ್ಲೇ ಹೋದಂತಾಗುತ್ತದೆ ಎಂದು ಸಮಾಧಾನ ವ್ಯಕ್ತಪಡಿಸಿದರು.



