Connect with us

Dvgsuddi Kannada | online news portal | Kannada news online

ದಾವಣಗೆರೆಗೆ ಸಿದ್ದೇಶ್ವರ ಕೇವಲ ದುಡ್ಡು ಮಾಡಲು ಬಂದಿರೋದು; ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ

IMG 20230714 221403

ದಾವಣಗೆರೆ

ದಾವಣಗೆರೆಗೆ ಸಿದ್ದೇಶ್ವರ ಕೇವಲ ದುಡ್ಡು ಮಾಡಲು ಬಂದಿರೋದು; ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ

ದಾವಣಗೆರೆ; ಸಂಸದ ಸಿದ್ದೇಶ್ವರ ಅವರು ದಾವಣಗೆರೆಗೆ ಬಂದಿರುವುದು ಕೇವಲ ದುಡ್ಡು ಮಾಡಲು. ದುಡ್ಡು ಮಾಡಿಕೊಂಡು ಹೋಗೋದು ಅಷ್ಟೇ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌ . ಮಲ್ಲಿಕಾರ್ಜುನ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದರು ದಾವಣಗೆರೆ ಲೋಕಸಭಾ ಸದಸ್ಯರಾಗಿ ಮಾತ್ರ ಕಾರ್ಯನಿರ್ವಹಿಸಿದೆ, ರಾಜ್ಯಕ್ಕೆ ಸಂಬಂಧಿಸಿದ ಯಾವ ಯೋಜನೆ, ಕಾಮಗಾರಿಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ತಾನು ಯಾವುದೇ ತಪ್ಪು ಮಾಡಿಲ್ಲ ಎಂಬ ಬಲವಾದ ನಂಬಿಕೆ ಇದ್ದರೆ ಸಿದ್ದೇಶ್ವರ ಆಣೆ ಮಾಡಲಿ ಎಂದು ಸವಾಲು ಹಾಕಿದರು.

ಸಿದ್ದೇಶ್ವರ ಬಿಜೆಪಿ ಆಡಳಿತಾವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜೊತೆ ಸೇರಿಕೊಂಡು ಲೂಟಿ ಹೊಡೆದಿದ್ದಾರೆ. ಸ್ಮಾರ್ಟ್ ಸಿಟಿ, ಕುಂದುವಾಡ ಕೆರೆ ಸೇರಿದಂತೆ ವಿವಿಧ ಯೋಜನೆ ಕಮಿಷನ್ ಹೊಡೆದಿದ್ದಾರೆ. ಮಂಗ ತಿಂದು ಮೇಕೆಗೆ ಒರೆಸಿತ್ತು ಎಂಬ ಗಾದೆಯಂತೆ ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ ಮತ್ತು ರೇಣುಕಾಚಾರ್ಯರ ಮೇಲೆ ಈಗ ಸಿದ್ದೇಶ್ವರ ಎಲ್ಲಾ ತಪ್ಪು ಹಾಕಲು ಮುಂದಾಗಿದ್ದಾರೆ.

ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲೆಯ ನಾಯಕರಿಗೆ ಅಧಿಕಾರ ಮಾಡಲು ಬಿಡಲಿಲ್ಲ. ಎಲ್ಲಾ ತಿಂದ ಮೇಲೆ ನಾನು ಮಧ್ಯಪ್ರವೇಶಿಸುವುದಿಲ್ಲ ನ್ನುವುದಾದರೆ ಆಣೆ ಮಾಡಲಿ. ಬೇರೆಯವರ ಮೇಲರ ಯಾಕೆ ಹಾಕಬೇಕು.

ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಲು ಕಾರಣ ನಾವು. ಸ್ಮಾರ್ಟ್ ಸಿಟಿ ನಾವು ತಂದಿದ್ದು ಎಂದು ಹೇಳಿಕೊಳ್ಳಲು ಜಿ.ಎಂ. ಸಿದ್ದೇಶ್ವರ ಅವರಿಗೆ ನಾಚಿಕೆ ಆಗಬೇಕು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನನಗೆ ಅಣ್ಣ ಆಗಬೇಕು. ಸಿದ್ದೇಶ್ವರ ಕೂಡ ಸಂಬಂಧಿಕನೇ. ಇಬ್ಬರ ನಡವಳಿಕೆಯಲ್ಲಿ ಭಾರೀ ವ್ಯತ್ಯಾಸ ಇದೆ. ರವೀಂದ್ರನಾಥ್ ಅವರಿಗೆ ಇರುವ ತೂಕ ಸಿದ್ದೇಶ್ವರ ಅವರಿಗಿಲ್ಲ ರವೀಂದ್ರನಾಥ ತೂಕ ಸಿದ್ದೇಶ್ವರಗೆ ಬರೋಲ್ಲ. ಹೋರಾಟದಿಂದ ಮೇಲೆ ಬಂದವರು. ಹಾಗಾಗಿ, ಅವರಿಗೆ ಬೆಲೆ ಇದೆ. ನಮಗೂ ಅವರ ಬಗ್ಗೆ ಗೌರವವಿದೆ. ಅದನ್ನು ಬಿಟ್ಟು ರವೀಂದ್ರನಾಥ್ ಹಾಗೂ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದರೆ ಅರ್ಥವೇನು? ಎಂದರು.

ಹೊನ್ನಾಳಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು ನನ್ನ ಮನೆಗೆ ಬಂದು ಮಾತನಾಡಿಸಿದ್ದು ಇದೇ ಮೊದಲು. ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕು ಬರಪೀಡಿತ ಎಂದು ಘೋಷಿಸಲು ಮನವಿ ಸಲ್ಲಿಸಲು ಬಂದಿದ್ದರು ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top