ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ ರಾಷ್ಟ್ರೀಯ ಏಕತಾ ಓಟ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ: ರಾಷ್ಟ್ರೀಯ ಏಕತಾ ದಿನ ಅಂಗವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಇಂದು (ಅ.31) ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ಓಟಕ್ಕೆ ಎಸ್ಪಿ ಉಮಾ ಪ್ರಶಾಂತ್ ಚಾಲನೆ ನೀಡಿದರು.

ಏಕತಾ ಓಟವು ಗುಂಡಿ ವೃತ್ತ ದಿಂದ ಆರಂಭವಾಗಿ ವಿದ್ಯಾರ್ಥಿ ಭವನ್, ಅಂಬೆಡ್ಕರ್ ವೃತ್ತ , ಎವಿಕೆ ರಸ್ತೆ, ರೇಣುಕಾ ಮಂದಿರ ವೃತ್ತ, ಪಿಬಿ ರಸ್ತೆ ಮೂಲಕ ಅರುಣ ವೃತ್ತ ದಿಂದ ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಮುಕ್ತಾಯವಾಯಿತು.

ಏಕತಾ ಓಟದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಏಕತಾ ಓಟದಲ್ಲಿ ಮೊದಲ 03 ವಿಜೇತರಿಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಬಹುಮಾನ ವಿತರಿಸಿದರು.

ಏಕತಾ ಓಟದಲ್ಲಿ ಭಾಗವಹಿಸಿದ ಪೊಲೀಸ್ ವಿಭಾಗದಲ್ಲಿ ವಿಜೇತರಾದ ಮೊದಲ ಬಹುಮಾನ: ದೃವ, ಬಡಾವಣೆ ಪೊಲೀಸ್ ಠಾಣೆ, ದ್ವಿತೀಯ ಬಹುಮಾನ: ಕಿರಣ್ ಕುಮಾರ ಡಿಎಆರ್, ತೃತೀಯ ಬಹುಮಾನ: ಅವಿನಾಶ

  • ಪಬ್ಲಿಕ್ ವಿಭಾಗದಲ್ಲಿ ವಿಜೇತರು
    ಮೊದಲ ಬಹುಮಾನ: ಮಲ್ಲಿಕಾರ್ಜುನ
  • ದ್ವಿತೀಯ ಬಹುಮಾನ: ವೆಂಕಟೇಶ
  • ತೃತೀಯ ಬಹುಮಾನ: ಆಕಾಶ್ ಎಲ್ಲರೂ ಕ್ರೀಡಾ ಹಾಸ್ಟೆಲ್, ದಾವಣಗೆರೆ

ಮಹಿಳೆ ವಿಭಾಗದಲ್ಲಿ ವಿಜೇತರು

  • ಮೊದಲ ಬಹುಮಾನ: ಶಮೀಮ್ ಉನ್ನೀಸ್ ಪಿಎಸ್ ಐ ಬಸವನಗರ ಠಾಣೆ,
  • ದ್ವಿತೀಯ ಬಹುಮಾನ: ಲತಾ ವಿ ತಾಳೇಕರ್, ಪಿ ಎಸ್ ಐ, ಬಡಾವಣೆ ಠಾಣೆ
  • ತೃತೀಯ ಬಹುಮಾನ: ಪರಮೀಳಮ್ಮ ಪಿ ಎಸ್ ಐ ಬಸವನಗರ ಠಾಣೆ

ಸರ್ದಾರ್ ವಲ್ಲಬಾಯ್ ಪಟೇಲ್ ರವರ 150 ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಹಿನ್ನೆಲೆ *ಜಿಲ್ಲಾ ಪೊಲೀಸ್ ವತಿಯಿಂದ ಬಿಇಎ ಹಾಗೂ ಎಸ್.ಬಿ.ಸಿ ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದ ಸರ್ದಾರ್ ವಲ್ಲಬಾಯ್ ಪಟೇಲ್ ರವರ ದೃಷ್ಠಿಕೋನ & ಜೀವನ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ವಿಜೇತರು: ಎಸ್.ಬಿ.ಸಿ ಕಾಲೇಜ್ ವಿಧ್ಯಾರ್ಥಿಗಳಾದ ಮೊದಲ ಬಹುಮಾನ: ಭೂಮಿಕಾ ಜಿ, ಪ್ರಥಮ ವರ್ಷ ಎಂ.ಕಾಂ., ದ್ವಿತೀಯ ಬಹುಮಾನ: ಮೇಘನಾ ಎಂ, ದ್ವಿತೀಯ ವರ್ಷ ಬಿ ಎ, ತೃತೀಯ ಬಹುಮಾನ: ಸಹನಾ ಎಂ ಬಿ ದ್ವಿತೀಯ ವರ್ಷ ಬಿ ಸಿ ಎ. ಬಿ ಇ ಎ ಕಾಲೇಜ್ ವಿಧ್ಯಾರ್ಥಿಗಳು:ಮೊದಲ ಬಹುಮಾನ: ಸುಮಂಗಲ ಶೇಖಪ್ಪ ಗೌಳಿ., ದ್ವಿತೀಯ ಬಹುಮಾನ: ಅಶ್ವಿನಿ ಜಿ, ತೃತೀಯ ಬಹುಮಾನ: ರಕ್ಸರ್ ಬಾನು

ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್, ಪ್ರತಿ ವರ್ಷದಂತೆ ಅ. 31 ರಂದು ನಾವು ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಇಂದು ರಾಷ್ಟ್ರೀಯ ಏಕತಾ ಓಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 570 ರಾಜ್ಯಗಳನ್ನು ಒಟ್ಟುಗೂಡಿಸಿದ ಮಹಾನ್ ವ್ಯಕ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್. ಎಲ್ಲಾ ರಾಜ್ಯಗಳು ತಮ್ಮ ಭಾಷೆಗಳ, ಸಂಸ್ಕೃತಿಯ, ಪ್ರಾದೇಶಿಕ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳಾಗಿ ವಿಂಗಡನೆಯಾಗಿದೆ. ಅವುಗಳನ್ನು ಒಂದುಗೂಡಿಸಲು ಸರ್ದಾರ್ ವಲ್ಲಭ ಬಾಯಿ ಪಟೇಲ್ ಬಹಳ ಶ್ರಮವಹಿಸಿದ್ದಾರೆ.

ಹಾಗೆಯೇ ನಮ್ಮ ದೇಶದಲ್ಲಿ ಎಲ್ಲ ಧರ್ಮದವರು, ಎಲ್ಲ ಭಾಷೆಯವರೂ ಜೊತೆಯಾಗಿ ಇದ್ದಾರೆ. ವಿವಿಧತೆಯಲ್ಲಿ ಐಕ್ಯತೆ ಇರಬೇಕು ಎಂಬ ಧ್ಯೇಯವಾಕ್ಯವಾಗಿದೆ. ನಮ್ಮ ದೇಶದ ರಕ್ಷಣೆ, ಭದ್ರತೆ, ಏಕತೆ, ಐಕ್ಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ವೈಯಕ್ತಿಕ ಜೀವನದಲ್ಲಿ ಎಲ್ಲರೂ ಒಗ್ಗಟ್ಟಾಗಿ, ಒಂದಾಗಿದ್ದರೆ ಚೆನ್ನಾಗಿ ಕೆಲಸ ನಿರ್ವಹಿಸಲು ಸಾಧ್ಯ. ನಾವೆಲ್ಲರೂ ರಾಷ್ಟ್ರದ ಏಕತೆ, ಐಕ್ಯತೆ, ಭದ್ರತೆಗೋಸ್ಕರ ಹೋರಾಡಬೇಕು ಎಂದು ಕರೆ ನೀಡಿದರು.

ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸಿರು.ಇಂದಿನ ಕಾರ್ಯಕ್ರಮದಲ್ಲಿ ಎಎಸ್ಪಿ ಪರಮೇಶ್ವರ ಹೆಗಡೆ ರವರು, ಡಿವೈಎಸ್ಪಿ ಗಳಾದ ಬಸವರಾಜ್ ಬಿ ಎಸ್, ಶರಣಬಸವೇಶ್ವರ ಬಿ, ಪಿ ಬಿ ಪ್ರಕಾಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *