ದಾವಣಗೆರೆ: ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಸುಧಾರಿಸುವ ಮಹತ್ವದ ಕ್ರಮವನ್ನು ಭಾರತ ಸರ್ಕಾರ ಕೈಗೊಂಡಿದ್ದು, ಮೂರು ಹೊಸ ಕ್ರಿಮಿನಲ್ ಕಾನೂನುಗಳು ಇಂದಿನಿಂದ ಅಂದರೆ (New Criminal Laws) ಜುಲೈ 1 ರಿಂದ ಜಾರಿಗೆ ಬಂದಿದೆ. ಭಾರತೀಯ ನ್ಯಾಯ ಸಂಹಿತಾ (Bharatiya Nyaya Sanhita) ಅಥವಾ ಬಿಎನ್ಎಸ್ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Bharatiya Nagarik Suraksha Sanhita) ಅಥವಾ ಬಿಎನ್ಎಸ್ಎಸ್ (BNSS) , ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (Bharatiya Sakshya Adhiniyam) ಅಥವಾ ಬಿಎಸ್ಎ (BSA) ಹೊಸದಾಗಿ ಜಾರಿಗೊಳ್ಳುವ ಕ್ರಿಮಿನಲ್ ಕಾನೂನುಗಳು. ಇವುಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ ಅಥವಾ ಐಪಿಸಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಥವಾ ಸಿಆರ್ಪಿಸಿ ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯ್ದೆಯ ಸ್ಥಾನವನ್ನು ತುಂಬಲಿವೆ.
ಭಾರತೀಯ ನ್ಯಾಯ ಸಂಹಿತಾ (Bharatiya Nyaya Sanhita): ಭಾರತೀಯ ನ್ಯಾಯ ಸಂಹಿತಾ 163 ವರ್ಷಗಳ ಹಳೆಯ ಐಪಿಸಿಯ ಜಾಗವನ್ನು ತುಂಬಲಿದೆ. ಇದು ಅಪರಾಧ ಕಾನೂನಿನಲ್ಲಿ ಬಹಳಷ್ಟು ಬದಲಾವಣೆಯನ್ನು ತರಲಿದೆ. ಬಿಎನ್ಎಸ್ ಸೆಕ್ಷನ್ 4 ರ ಪ್ರಕಾರ ಶಿಕ್ಷೆಯ ರೂಪವಾಗಿ ಸಮುದಾಯ ಸೇವೆಯನ್ನು ಪರಿಚಯಿಸಲಾಗುತ್ತಿದೆ.
ಲೈಂಗಿಕ ಅಪರಾಧ ಎಸಗಿದವರ ವಿರುದ್ಧ ಕಠಿಣ ಶಿಕ್ಷೆಯನ್ನು ಹೊಸ ಕಾನೂನು ವಿಧಿಸುವುದಕ್ಕೆ ಅವಕಾಶ ನೀಡಿದೆ. ಮದುವೆ ಉದ್ದೇಶವಿಲ್ಲದೆ ಲೈಂಗಿಕ ಆಸೆ ಪೂರೈಸಲು ಮೋಸ ಮಾಡಿ, ವಂಚಿಸಿ ಲೈಂಗಿಕ ದೌರ್ಜನ್ಯವೆಸಗಿದರೆ ಅಂಥವರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಉದ್ಯೋಗ, ಬಡ್ತಿ ಅಥವಾ ಮದುವೆಗೆ ಸಂಬಂಧಿಸಿದ ಸುಳ್ಳು ಭರವಸೆಗಳನ್ನು ಒಬ್ಬರ ಗುರುತನ್ನು ಮರೆಮಾಚಿ ವಂಚಿಸಿದರೆ ಅದಕ್ಕೂ ಹೊಸ ಕಾನೂನು ಶಿಕ್ಷೆ ವಿಧಿಸುವುದನ್ನು ಉಲ್ಲೇಖಿಸಿದೆ.
ಇದು ಕಾನೂನುಬಾಹಿರ ಚಟುವಟಿಕೆಗಳ ವಿಶಾಲ ವ್ಯಾಪ್ತಿಯನ್ನು ಒಳಗೊಂಡಿದೆ. ಕಾನೂನುಬಾಹಿರ ವಿಧಾನಗಳ ಮೂಲಕ ಕಾರ್ಯಗತಗೊಳಿಸಲಾದ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದಕ್ಕೆ ಅವಕಾಶ ಒದಗಿಸಿದೆ. ಇನ್ನು, ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವ ಕೃತ್ಯಗಳಿಗೆ, ಜನರಲ್ಲಿ ಭಯೋತ್ಪಾದನೆಯನ್ನು ಹೊಡೆಯುವ ಉದ್ದೇಶದಿಂದ ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ ಅಥವಾ ಆರ್ಥಿಕ ಭದ್ರತೆಗೆ ಬೆದರಿಕೆ ಹಾಕುವ ಯಾವುದೇ ಚಟುವಟಿಕೆ ಎಂದು ಭಯೋತ್ಪಾದಕ ಕೃತ್ಯವನ್ನು ಬಿಎನ್ಎಸ್ ವ್ಯಾಖ್ಯಾನಿಸುತ್ತದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ(Bharatiya Nagarik Suraksha Sanhita)- ಈಗ ಚಾಲ್ತಿಯಲ್ಲಿರುವ ಹಳೆಯ 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಜಾರಿಗೆ ಬರುತ್ತಿದೆ. ಇದರಲ್ಲಿ, ವಿಚಾರಣಾಧೀನ ಕೈದಿಗಳಿಗೆ ಅಂದರೆ, ಜೀವಾವಧಿ ಶಿಕ್ಷೆ ಅಥವಾ ಬಹು ಆರೋಪಗಳನ್ನು ಹೊಂದಿರುವ ಪ್ರಕರಣಗಳನ್ನು ಹೊರತುಪಡಿಸಿ, ಮೊದಲ ಬಾರಿಗೆ ಸೆರೆವಾಸ ಅನುಭವಿಸುತ್ತಿರುವ ಅಪರಾಧಿಗಳು ತಮ್ಮ ಗರಿಷ್ಠ ಶಿಕ್ಷೆಯ ಮೂರನೇ ಒಂದು ಭಾಗದಷ್ಟು ಶಿಕ್ಷೆ ಪೂರೈಸಿದ ನಂತರ ಜಾಮೀನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಕಡ್ಡಾಯ ಜಾಮೀನು ಪಡೆಯಲು ಮಾನದಂಡವನ್ನು ನಿಗದಿ ಮಾಡಿದೆ.
ಈಗ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಗಳಿಗೆ ಫೋರೆನ್ಸಿಕ್ ತನಿಖೆಯು ಕಡ್ಡಾಯವಾಗಿದೆ. ಅಂದರೆ, ಫೋರೆನ್ಸಿಕ್ ತಜ್ಞರು ಅಪರಾಧದ ಸ್ಥಳಗಳಿಂದ ಸಾಕ್ಷ್ಯವನ್ನು ಸಂಗ್ರಹಿಸುತ್ತಾರೆ ಮತ್ತು ದಾಖಲಿಸುತ್ತಾರೆ. ಈ ಸಾಕ್ಷ್ಯ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಯಾವುದೇ ಒಂದು ರಾಜ್ಯವು ವಿಧಿವಿಜ್ಞಾನ ಸೌಲಭ್ಯವನ್ನು ಹೊಂದಿಲ್ಲದಿದ್ದರೆ, ಅದು ಇನ್ನೊಂದು ರಾಜ್ಯದಲ್ಲಿ ಸೌಲಭ್ಯವನ್ನು ಬಳಸುತ್ತದೆ.
ಭಾರತೀಯ ಸಾಕ್ಷ್ಯ ಅಧಿನಿಯಮ (Bharatiya Sakshya Adhiniyam) – ಈಗ ಚಾಲ್ತಿಯಲ್ಲಿರುವ ಭಾರತೀಯ ಸಾಕ್ಷ್ಯ ಕಾಯ್ದೆಯ ಜಾಗವನ್ನು ಹೊಸ ಅಪರಾಧ ಕಾನೂನು ಆಗಿರುವ ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್ಎ) ಭರ್ತಿಮಾಡಲಿದೆ. ಇದು ಎಲೆಕ್ಟ್ರಾನಿಕ್ಸ್ ಪುರಾವೆಗಳಿಗೆ ಸಂಬಂಧಿಸಿ ನಿರ್ಣಾಯಕ ಅಪ್ಡೇಟ್ಸ್ ಅನ್ನು ಹೊಂದಿದೆ. ಹೊಸ ಕಾನೂನು ಎಲೆಕ್ಟ್ರಾನಿಕ್ ಪುರಾವೆಗಳ ಮೇಲಿನ ನಿಯಮಗಳನ್ನು ಸುವ್ಯವಸ್ಥಿತಗೊಳಿಸುತ್ತದೆ.
ಸದರಿ ಮೇಲ್ಕಂಡ ಮೂರು ಹೊಸ ಕಾನೂನು ಗಳ ಜಾರಿಗಾಗಿ ಕಳೆದ ಒಂದು ತಿಂಗಳಿಂದ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವತಿಯಿಂದ ಹಲವು ಕಾರ್ಯಾಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಮಟ್ಟದಲ್ಲಿ, ಉಪ ವಿಭಾಗ, ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಹಾಗೂ ಪೊಲೀಸ್ ಠಾಣಾ ಮಟ್ಟದಲ್ಲಿ ಅಧಿಕಾರಿ & ಸಿಬ್ಬಂದಿಗಳಿಗೆ ಹೊಸ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಹಿರಿಯ ಅಧಿಕಾರಿಗಳಿಂದ, ಕಾನೂನು ತಜ್ಞರಿಂದ, ಕಾನೂನು ಅಧಿಕಾರಿಗಳ ಸಹಯೋಗದಲ್ಲಿ ಹೊಸ ಕಾನೂನುಗಳ ಜಾರಿಯ ಬಗ್ಗೆ ಹಲವು ಕಾರ್ಯಾಗಾರಗಳು, ತರಬೇತಿಗಳು, ಆನ್ ಲೈನ್ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿತ್ತು ಅಲ್ಲದೇ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಹೊಸ ಕಾನೂನುಗಳ ಬಗ್ಗೆ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹಳೆಯ ಭಾರತೀಯ ದಂಡ ಸಂಹಿತೆ ಅಥವಾ ಐಪಿಸಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಥವಾ ಸಿಆರ್ಪಿಸಿ ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯ್ದೆಯ ನಿಯಮಗಳ ಬದಲಿಗೆ ನೂತನ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಹಾಗೂ ದೈನಂದಿನ ಪ್ರಕರಣಗಳ ದಾಖಲು, ತನಿಖೆ ಹಾಗೂ ಇತರೆ ಕಾರ್ಯಾಗಳಲ್ಲಿ ಜಾರಿಗೆ / ಅಳವಡಿಕೆಗೆ ಪೂರ್ಣ ಸಿದ್ದತೆ ಮಾಡಿಕೊಂಡಿದೆ.
ದಾವಣಗೆರೆ ಜಿಲ್ಲೆಯಲ್ಲಿ ನೂತನ ಕಾನೂನುಗಳಡಿಯಲ್ಲಿಂದು ನ್ಯಾಮತಿ ಪೊಲೀಸ್ ಠಾಣೆಯಲ್ಲಿ THE BHARATIYA NYAYA SANHITA (BNS), 2023 (U/s-106(1),281) ರೀತ್ಯಾ ಅಪಘಾತದ Fatal ಪ್ರಕರಣ ದಾಖಲಾಗಿರುತ್ತದೆ. ಮಲೆಬೆನ್ನುರು ಪೊಲೀಸ್ ಠಾಣೆಯಲ್ಲಿ BNSS 2023, U/s 194 ಕಾನೂನಡಿಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿರುತ್ತದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 01) THE BHARATIYA NYAYA SANHITA (BNS), 2023 (U/s-318(2) ರೀತ್ಯಾ ಗಮನ ಬೆರೆಡೆ ಸೆಳದು ಹಣ ದೋಚಿದ ಪ್ರಕರಣ ದಾಖಲಾಗಿರುತ್ತದೆ. 02) THE BHARATIYA NYAYA SANHITA (BNS), 2023 (U/s-305, 331(3), 331(4) ರೀತ್ಯಾ ಮನೆಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಜಿಲ್ಲೆಯಲ್ಲಿ ನೂತನ ಕಾನೂನುಗಳಡಿಯಲ್ಲಿಂದು ಒಟ್ಟು 04 ಪ್ರಕರಣಗಳು ದಾಖಲಾಗಿರುತ್ತವೆ.*
ಅಲ್ಲದೇ ಸಾರ್ವಜನಿಕರಿಗೂ, ವಿದ್ಯಾರ್ಥಿಗಳಿಗೂ ಹೊಸ ಕಾನೂನುಗಳ ಬಗ್ಗೆ ಜಾಗೃತಿ / ಅರಿವು ಮೂಡಿಸುವ ಕಾರ್ಯಾಕ್ರಮಗಳನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ.ರಾಜ್ಯದಲ್ಲಿ ಪೊಲೀಸ್ ಇಲಾಖೆಯನ್ನು ಉನ್ನತಿಕರಿಸುವ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದು, ಅದರಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಉನ್ನತ ತಾಂತ್ರಿಕತೆ ಬಳಕೆ, ವಿಧಿವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ, ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿರುವ ಪೊಲೀಸ್ ಐಟಿ ಯನ್ನು ಉನ್ನತಿಸಕರಿಸಿದ್ದು, ಹೊಸ ಕಾನೂನುಗಳ ಜಾರಿಗೆ ಅನೂಕೂಲಕ್ಕಾಗಿ *ಪೊಲೀಸ್ ಐಟಿ 2.0* ಜಾರಿ ಮಾಡಿದ್ದು, ಸಾರ್ವಜನಿಕರಿಗೆ ನ್ಯಾಯಸಮ್ಮತ, ತುರ್ತು ನ್ಯಾಯ ನೀಡಲು ಅನೂಕೂಲವಾಗುವಂತೆ ಹಲವು ಮಾರ್ಪಡುಗಳನ್ನು ಮಾಡಿದೆ.
ಸೀನ್ ಆಪ್ ಕ್ರೈಂ (SOCO) ಅಪೀಸರ್ಸ್ ಗಳನ್ನು ನೇಮಕಮಾಡಿದ್ದು ಜಿಲ್ಲೆಯಲ್ಲಿ ನುರಿತ ತಜ್ಞಾ ಸೀನ್ ಆಪ್ ಕ್ರೈಂ ಅಧಿಕಾರಿಗಳು ಪ್ರತಿ ಕ್ರೈಂ ಘಟನಾ ಸ್ಥಳಕ್ಕೆ ತೆರಳಿ ಸುಧಾರಿತ ಉಪಕರಣಗಳ ಮೂಲಕ ಪ್ರತಿ ಪ್ರಕರಣಗಳಲ್ಲೂ ಬಹು ಎಚ್ಚರಿಕೆ ವಹಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾರೆ.
ಜಿಲ್ಲೆಯಲ್ಲಿ ಸೈಬರ್ ಅಪರಾಧಗಳ ತನಿಖೆಗಾಗಿ ಸಿಇಎನ್ ಪೊಲೀಸ್ ಠಾಣೆಯನ್ನು ತೆರೆದಿದ್ದು,ಡಿವೈಎಸ್ಪಿ ದರ್ಜೆಯ ಅಧಿಕಾರಿಯನ್ನು ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಯನ್ನು ನೇಮಕಮಾಡಿದೆ.ಸಾರ್ವಜನಿಕ ಸೇವೆಗೆ, ಹೊಸ ಕಾನೂನುಗಳ ಅಳವಡಿಕೆಯಲ್ಲಿ / ಜಾರಿಯಲ್ಲಿ ಜಿಲ್ಲಾ ಪೊಲೀಸ್ ಸನ್ನದ್ಧವಾಗಿದೆ. ಹೊಸ ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯೋನ್ಮುಕವಾಗಿದೆ.